Thursday, March 12, 2026

ಸುದ್ದಿ

ಸುದ್ದಿ

ಕೊಲೆಗಾರನೂ ವಿ.ಐ.ಪಿ. | ಪೋಲೀಸ್ ಇಲಾಖೆಯ ಮುದ್ರೆಯಲ್ಲೇ ವಿನಾಯಕ ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈಗೆ ವಿ.ಐ.ಪಿ. ಪಾಸ್. 

ದಕ್ಷಿಣ ಕನ್ನಡ : ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈಗೆ ಇಂದು ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವಿಐಪಿ ಪಾಸನ್ನು ನೀಡಿರುವುದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ. ಸ್ವತಃ ನರೇಶ್ ಶೆಣೈ ಇದನ್ನು ತನ್ನ ಫೇಸ್ಬುಕ್’ನಲ್ಲಿ ಹಂಚಿಕೊಂಡಿದ್ದು, “ಧನ್ಯೋಸ್ಮಿ #ನಮೋ” ಎಂದು ಬರೆದುಕೊಂಡಿದ್ದಾನೆ. ಈ ವಿಐಪಿ ಪಾಸನ್ನು ಪ್ರಧಾನಿ ಕಾರ್ಯಕ್ರಮದ ಸಂಘಟಕರಾದ ಧರ್ಮಸ್ಥಳ ಅಭಿವೃದ್ಧಿ ಯೋಜನೆಯ ಅಧಿಕೃತ ಮೊಹರು ಇದ್ದು, ಜಿಲ್ಲಾ...
ಸುದ್ದಿ

ಟಿಪ್ಪು ಅವಹೇಳನೆ ಉಪ್ಪಿನಂಗಡಿಯಲ್ಲಿ ಹಿಂ.ಜಾ.ವೇ ಮುಖಂಡ ಮನೋಜ್ ರೈ ಮೇಲೆ ಪ್ರಕರಣ | ಹಿಂ.ಜಾ.ವೇ ಖಂಡನೆ

ಉಪ್ಪಿನಂಗಡಿ : ಸಾಮಾಜಿಕ ಜಾಲ ತಾಣದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನ ಕಾರಿಯಾಗಿ ಚಿತ್ರಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿಗಳಾದ ಶ್ರೀ ಮನೋಜ್ ರೈ ಪೆರ್ನೆ ಇವರ ಮೇಲೆ ಟಿಪ್ಪು ಸುಲ್ತಾನ್ ಕ್ರಿಯಾ ಸಮಿತಿ ಪೆರ್ನೆ ಯ ಕಾರ್ಯದರ್ಶಿಯಾದ ಸಂಶುದ್ದೀನ್ ಉಪ್ಪಿನಂಗಡಿ ಟಾಣೆಗೆ ದೂರು ನೀಡಿದ್ದು, ಇದರ ಬಗ್ಗೆ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾದ ಬ.ಗಣರಾಜ ಭಟ್ ಕೆದಿಲ ಖಂಡನೆ ಹಾಗು ಸಮರ್ಥನೆ ನೀಡಿದ್ದಾರೆ. ತಾರೀಖ್-ಎ-ಟಿಪ್ಪು,...
ಸುದ್ದಿ

ಉಡುಪಿ ಜಿಲ್ಲಾ ಗೋ ಪರಿವಾರದ ಘೋಷಣೆ

ಉಡುಪಿ: ಜಿಲ್ಲಾ ಗೋ ಪರಿವಾರದ ಘೋಷಣೆ 30. 10. 2017 ರಂದು ಸೋಮವಾರ ಸಂಜೆ 5.30 ಉಡುಪಿ ಶ್ರೀ ಕೃಷ್ಣ ಮಠದ ಹಿಂಭಾಗ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಜಿಲ್ಲೆಯಲ್ಲಿ ಅಭಯಾಕ್ಷರ ಅಭಿಯಾನದ ಬಗ್ಗೆ ಮಾರ್ಗದರ್ಶನ ನೀಡುವರು. ಈ ಕಾರ್ಯಕ್ರಮಕ್ಕೆ ನೀವು ಆಗಮಿಸಿ ವ್ಯಾಪಕ ಪ್ರಚಾರ ನೀಡಬೇಕಾಗಿ ಕೋರುತ್ತೇವೆ. ಉದಯಶಂಕರ್ ಭಟ್ ಅಧ್ಯಕ್ಷರು,ಮಾಧ್ಯಮ ವಿಭಾಗ....
ಸುದ್ದಿ

ಸಂಗೀತಕ್ಕೆ ಗೂಡ್ ಬೈಯ್ ಹೇಳಿದ ಗಾನ ಕೋಗಿಲೆ ಎಸ್. ಜಾನಕಿ | ಮೈಸೂರಿನಲ್ಲಿ ಕೊನೆಯ ಕಾರ್ಯಕ್ರಮ.

ಮೈಸೂರು : ಐದು ದಶಕಗಳ ಕಾಲ ತಮ್ಮ ಮಧುರ ಕಂಠ ಸಿರಿಯಿಂದ ಸಂಗೀತಪ್ರಿಯರನ್ನು ರಂಜಿಸಿದ ಗಾನಕೋಗಿಲೆ ಎಸ್​.ಜಾನಕಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ. ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ತಮ್ಮ ಕೊನೆಯ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಗಾಯನ ಲೋಕಕ್ಕೆ ವಿದಾಯ ಹೇಳಿದರು. ಗಣ್ಯಾತಿಗಣ್ಯರು, ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು....
ಸುದ್ದಿ

ಸ್ಟ್ರಾ ಉಪಯೋಗಿಸದೆ ಎಳನೀರು ಕುಡಿದ್ರು | ಉಪವಾಸ ಮಾಡಿ ಸಂಸ್ಕಾರದ ಪಾಠ ಮಾಡಿದ್ರು, ಮೋದಿ.

ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಉಪವಾಸವಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಬೆಳಗ್ಗೆ ಎದ್ದವರು ಒಂದು ಹನಿ ನೀರೂ ಕುಡಿಯದೆ ಕರ್ನಾಟಕಕ್ಕೆ ಆಗಮಿಸಿದ್ದರು. 11 ಗಂಟೆ ಸುಮಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಬಂದಿಳಿದರು. ಬಿರು ಬೇಸಿಗೆಯಂತಿದ್ದ ವಾತಾವರಣ- ನೆತ್ತಿ ಸುಡುತ್ತಿದ್ದ ಸೂರ್ಯ ಎಲ್ಲರನ್ನೂ ಹೈರಾಣಾಗಿಸಿತ್ತು. ಆದ್ರೆ ಪ್ರಧಾನಿ ಮೋದಿ ಮಾತ್ರ ಗುಟುಕು ನೀರನ್ನೂ ಕುಡಿದಿರಲಿಲ್ಲ. ನರೇಂದ್ರ ಮೋದಿ ದೇವರ ದರ್ಶನ ಆಗುವವರೆಗೆ ಕೇವಲ ತೀರ್ಥವನ್ನು ಮಾತ್ರ ಸೇವನೆ ಮಾಡಿದ್ದರು....
ಸುದ್ದಿ

ಧರ್ಮಸ್ಥಳದಲ್ಲಿ ಪೂಜೆ ಮುಗಿಯುವವರೆಗೂ ಪ್ರಧಾನಿ ಮೋದಿ ಉಪವಾಸ !

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮಂಜುನಾಥ ಸ್ವಾಮಿಯ ದರ್ಶನದ ಪ್ರಯುಕ್ತ ಪೂಜೆ ಸಲ್ಲಿಸುವರೆಗೂ ಉಪವಾಸ ಮಾಡಿದ್ದಾರೆ. ಸ್ವಾಮಿಯ ದರ್ಶನಕ್ಕಾಗಿ ಪ್ರಧಾನಿ ಮೋದಿ ಅವರು ಬೆಳಗ್ಗೆಯಿಂದ ಉಪವಾಸವಿದ್ದು, ದೇವರ ದರ್ಶನ ಹಾಗೂ ಪೂಜೆ ಆದ ಬಳಿಕ ಪ್ರಸಾದ ಸ್ವೀಕಾರ ಮಾಡಿ ನಂತರ ಉಪಾಹಾರ ಸೇವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಬೆಳಗ್ಗಿನ ಉಪಾಹಾರವನ್ನು ಧರ್ಮಸ್ಥಳ ಕ್ಷೇತ್ರದ ಸುತ್ತುಪೌಳಿಯ ಹೊರಭಾಗದಲ್ಲಿರುವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗ ಸುಮಾರು 11 ಗಂಟೆ ಶ್ರೀ...
ಸುದ್ದಿ

ಬಂದೇ ಬಿಟ್ರು ಮೋದಿಜಿ !!

ಧರ್ಮಸ್ಥಳ:- ಮೋದಿ ಧರ್ಮಸ್ಥಳಕ್ಕೆ ಅಗಮನ ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುತಿರುವ ನರೇಂದ್ರ ಮೋದಿ  ಬಳಿಕ ಅಣ್ಣಪ್ಪ, ಗಣಪತಿಯ ದರ್ಶನ ಪಡೆದು ರತ್ನವರ ಹೆಗ್ಡೆ ಸ್ಟೆಡಿಯಂ ಗೆ ಆಗಮಿಸಿದ ಮೋದಿಯವರನ್ನು ಜೈ ಜೈ ಮೋದಿ ಎಂದು ಘೋಷಣೆಯ ಮೂಲಕ ಒನರು ಮೋದಿಜಿಯವರನ್ನು ಬರಮಾಡಿಕೊಂಡರು. ಮೋದಿಯವರನ್ನು ಸ್ವಾಗತಿಸಲು ಮೈದಾನದಲ್ಲಿ ಸುಮಾರು ಒಂದು ಲಕ್ಷಕ್ಕಿಂಲೂ ಅಧಿಕ ಮಂದಿ ಮುಗಿಬಿದ್ದರು. ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್, ಯೆಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗಿ. ಕನ್ನಡದಲ್ಲಿ ಭಾಷಣ...
ಸುದ್ದಿ

ಪೇಜಾವರ ಶ್ರೀ ಮತ್ತೆ ಅಸ್ವಸ್ಥ | ಆಸ್ಪತ್ರೆಗೆ ದಾಖಲು, ಡಿಶ್ಚಾರ್ಜ್!

ಉಡುಪಿ : ಹಠಾತ್ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಬುದವಾರ ಸಂಜೆ ಆಸ್ಪತ್ರೆಗೆದಾಖಲಾಗಿದ್ದ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಶ್ರೀಗಳು ಚಿಕಿತ್ಸೆ ಪಡೆದು ಇಂದು ಸಂಜೆ ಶ್ರೀ ಕೃಷ್ಣ ಮಠಕ್ಕೆ ಮರಳಿದ್ದಾರೆ. ಈ ವೇಳೆಶ್ರೀಗಳು ಮಾದ್ಯಮದೊಂದಿಗೆ ಮಾತನಾಡಿದ್ರು ಪೂಜೆ, ನಿತ್ಯಕಾರ್ಯಗಳಲ್ಲಿ ಯಾವುದೇ ನಿರ್ಬಂಧ ವಿಲ್ಲ ಆದರೆ ವಿಶ್ರಾಂತಿ ಬಳಿಕಪೂಜೆಯಲ್ಲಿ ತೊಡಗಲಿದ್ದೇನೆ. ಗುಡಿ ಕೈಗಾರಿಕೆಗಳನ್ನು ಜಿ.ಎಸ್.ಟಿಯಿಂದಮುಕ್ತ ಮಾಡಬೇಕೆಂದು ಕೈಗೊಂಡಿರುವ ಉಪವಾಸಕ್ಕೆ ನನ್ನ ಬೆಂಬಲ ವಿದೆಎಂದ್ರು. ಕೆಲವು ದಿನಗಳ ಹಿಂದೆ ಶ್ರೀಗಳಿಗೆ ಹರ್ನಿಯಾ ಶಸ್ತ್ರ...
1 3,265 3,266 3,267 3,268 3,269 3,289
Page 3267 of 3289