ನಂ.22ರಂದು ‘ಸ್ವಚ್ಛ ಪುತ್ತೂರು’ ಅಭಿಯಾನದ ಎರಡನೆಯ ವರುಷದ ಕೆಲಸಗಳ ಪೂರ್ವಭಾವಿ ಸಭೆ
ಪುತ್ತೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಸ್ವಚ್ಛ ಪುತ್ತೂರು ಅಭಿನಾಯನವು ನಡೆದಿತ್ತು. ಈಗ ಎರಡನೇ ವರ್ಷದ ಸ್ವಚ್ಛ ಪುತ್ತೂರು ಅಭಿಯಾನದ ಪೂರ್ವಭಾವಿ ಸಭೆಯು ದಿನಾಂಕ 22-11-2017ರ ಸಾಯಂಕಾಲ 6.00 ಗಂಟೆಗೆ ಕಲ್ಲಾರೆ ರಾಘವೇಂದ್ರ ಮಠದಲ್ಲಿ ರಾಮಕೃಷ್ಣ ಮಠದ ಪೂಜ್ಯ ಏಕಗಮ್ಯಾನಂದಜೀ ಮಹರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವುದು.ಪುತ್ತೂರಿನ ಎಲ್ಲ ಸಮಾಜಮುಖೀ ಸಂಘಟನೆಗಳ ಸದಸ್ಯರೂ ಅಪೇಕ್ಷಿತರು.ಬನ್ನಿ, ಕೈ ಜೋಡಿಸಿ.ಶೀಘ್ರದಲ್ಲೇ ಆರಂಭಗೊಳ್ಳಲಿರುವ ಸ್ವಚ್ಛ ಪುತ್ತೂರಿನ ಎರಡನೆಯ...







