Friday, March 13, 2026

ಸುದ್ದಿ

ಸುದ್ದಿ

ಹಿಂದೂ ಸಮಾಜೋತ್ಸವ ಶೋಭಾಯಾತ್ರೆ | ಮುಸ್ಲಿಮರಿಂದ ತಂಪು ಪಾನೀಯ ವಿತರಣೆ

  ಉಡುಪಿ : ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಸಂದರ್ಭ ಜಿಲ್ಲೆಯ ಮುಸ್ಲಿಂ ಸಮುದಾಯದ ವತಿಯಿಂದ ತಂಪುಪಾನೀಯ ವಿತರಿಸಲು ಸಿದ್ಧತೆ ನಡೆದಿದೆ. ಜೋಡುಕಟ್ಟೆಯಿಂದ ಮೆರವಣಿಗೆ ಹೊರಡಲಿದ್ದು ಅಲ್ಲಿಂದ ಸ್ವಲ್ಪ ಮುಂದಕ್ಕೆ ಕೋರ್ಟ್‌ ಸಂಕೀರ್ಣದ ಎದುರು ತಂಪು ಪಾನೀಯ ವಿತರಿಸಲಾಗುವುದು. ಈ ಹಿಂದೆ ಪೇಜಾವರ ಶ್ರೀಗಳ ಪರ್ಯಾಯ, ಪರ್ಕಳ ಮತ್ತು ಕಡಿಯಾಳಿಯ 50ನೇ ವರ್ಷದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿಯೂ ಇದೇ ರೀತಿ ತಂಪುಪಾನೀಯ ವಿತರಿಸಿದ್ದೇವೆ. ಇದು ನಮ್ಮ ಸ್ನೇಹ, ಸೌಹಾರ್ದದ ಸಂಕೇತ ಎಂದು...
ಸುದ್ದಿ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ ಮನೆತನಕ್ಕೆ ಅಪಮಾನ | ಯದುವೀರ್, ಪ್ರಮೋದಾದೇವಿಗಿಲ್ಲ ಆಹ್ವಾನ

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರಿನ ರಾಜಮನೆತಕ್ಕೆ ಅಗೌರವ ತೋರಿಸಲಾಗಿದೆ.  ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ರಾಜವಂಶದವರನ್ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನ ನೀಡದೆ ಸರ್ಕಾರ ಅಗೌರವ ತೋರಿದೆ. 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನೆ ಮಾಡಿದ್ದೇ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರನ್ನೇ ತಮ್ಮ ನಾಡಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಮೈಸೂರಿನ ಯದುವಂಶದ ಮಹಾರಾಜ ಯದುವೀರ್‌ಗಿಲ್ಲ ಸಮ್ಮೇಳನಕ್ಕೆ...
ಸುದ್ದಿ

2019ರೊಳಗೆ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ – ಪೇಜಾವರಶ್ರೀ, ಭಾಗವತ್ ಘೋಷಣೆ

  ಉಡುಪಿ:ರಾಮಮಂದಿರ ವಿವಾದ ಬಗೆಹರಿಯುವ ಹಂತಕ್ಕೆ ಬಂದಿದೆ. ಹಲವು ವರ್ಷಗಳ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ, ರಾಮಮಂದಿರ ಬಿಟ್ಟು ಬೇರೆ ಏನೂ ನಿರ್ಮಾಣವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ಹಾಗೂ ಪೇಜಾವರಶ್ರೀ ಘೋಷಿಸಿದ್ದಾರೆ. ಶುಕ್ರವಾರ ಉಡುಪಿ ಕಲ್ಸಂಕದ ರೋಯಲ್ ಗಾರ್ಡನ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಧರ್ಮ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಅವರು ಹೇಳಿದರು. ಇಂದು ನಾವು...
ಸುದ್ದಿ

ಸಚಿವ ರಮಾನಾಥ ರೈ ಮೇಲೆ ಜೇನು ನೊಣಗಳ ದಾಳಿ | ದಿಕ್ಕಾಪಾಲಾಗಿ ಓಡಿದ ರೈ

  ಬೆಳಗಾವಿ, ನ 24: ಅರಣ್ಯ ಇಲಾಖೆ ನಿರ್ಮಿಸಿದ ಜೀವ ವೈವಿದ್ಯ ಉದ್ಯಾನವನ ಉದ್ಘಾಟನೆ ಸಂದರ್ಭದಲ್ಲಿ ಜೇನು ನೊಣಗಳು ಏಕಾ‌ಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ಮಚ್ಛೆ ಗ್ರಾಮ ಬಳಿಯ ವಿಟಿಯು ಪಕ್ಕದಲ್ಲಿ ಅರಣ್ಯ ಇಲಾಖೆ ಕಾರ್ಯಕ್ರಮವನ್ನು ಅಯೋಜಿಸಿದ್ದು, ಅರಣ್ಯ ಸಚಿವ ರಮಾನಾಥ ರೈ ಆಗಮಿಸಿದ್ದರು. ರೈ ಮೇಲೆ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ನಡೆಸಿ ಸಚಿವರ ಮುಸುಡಿಗೆ ಕಚ್ಚಿದ್ದು, ಉದ್ಘಾಟನೆ ನಂತರ ಭಾಷಣ ಮಾಡಬೇಕಿದ್ದ ಅರಣ್ಯ ಸಚಿವ ರಮಾನಾಥ...
ಸುದ್ದಿ

ಹಿಂದು ಭಯೋತ್ಪಾದನೆ ವಿವಾದ | ನಟ ಕಮಲ್‌ ಹಾಸನ್‌ ವಿರುದ್ಧ ಎಫ್ಐಆರ್‌ಗೆ ಹೈಕೋರ್ಟ್‌ ಸೂಚನೆ

  ಚೆನ್ನೈ: ಹಿಂದೂ ಭಯೋತ್ಪಾದನೆ ಹೇಳಿಕೆ ನೀಡಿದ್ದ ನಟ ಕಮಲ್‌ ಹಾಸನ್‌ ವಿರುದ್ಧ ಅಗತ್ಯ ಬಿದ್ದರೆ ಎಫ್‌ಐಆರ್‌ ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಚೆನ್ನೈ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ. ಕೋಮು ಸಾಮರಸ್ಯವನ್ನು ಕದಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ಕಾರ್ಯದರ್ಶಿ ಕಮಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಸ್‌. ರಮೇಶ್‌, ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ...
ಸುದ್ದಿ

ಮೋದಿ ವಿರುದ್ಧ ತೀವೃ ವಾಗ್ದಾಳಿ | ಕಾಂಗ್ರೆಸ್‌ಗೆ ಮತ ನೀಡಿ ಎಂದ್ರು ಸಮ್ಮೇಳನಾಧ್ಯಕ್ಷ ಚಂಪಾ!

ಮೈಸೂರು: ನಾಡು ನುಡಿ ರಕ್ಷಣೆಗೆ ಸಂಬಂಧಿಸಿದಂತೆ ರಣಕಹಳೆ ಮೊಳಗಿಸುತ್ತಿದ್ದ ಸಾಹಿತ್ಯ ಸಮ್ಮೇಳನದಂತ ಅಗ್ರ ವೇದಿಕೆಯಲ್ಲಿ ರಾಜಕೀಯ ಪ್ರಸ್ತಾಪವಾಗಿರುವುದು ಸಾಹಿತ್ಯಾಭಿಮಾನಿಗಳಿಗೆ ಬೇಸರ ತರಿಸಿದೆ. ಇಂತದ್ದೊಂದು ಕಹಿ ಘಟನೆ ನಡೆದಿದ್ದು, ಇಂದು ಆರಂಭವಾದ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಗ್ರ ವೇದಿಕೆಯಲ್ಲಿ. ಅದುವೇ ಸ್ವತಃ ಸಮ್ಮೇಳನದ ಸರ್ವಾಧ್ಯಕ್ಷರು ಇಂತದ್ದೊಂದು ಅಪಥ್ಯ ವಿಚಾರವನ್ನು ಪ್ರಸ್ತಾಪಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕರಲ್ಲದೆ ರಾಜಕಾರಣಿಗಳೂ ಕೂಡ ಅಧ್ಯಕ್ಷರ ನಿಲುವಿಗೆ ಕಿಡಿಕಾರಿದ್ದಾರೆ. ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿರುವ...
ಸುದ್ದಿ

ಧರ್ಮ ಸಂಸದ್​ಗೆ ಚಾಲನೆ ; ದೀಪ ಬೆಳಗಿದ ಮೋಹನ್ ಭಾಗವತ್​ | ರಾಘವೇಶ್ವರಭಾರತೀ ಶ್ರೀ ಸೇರಿದಂತೆ ನೂರಾರು ಸಂತರು ಭಾಗಿ

  ಉಡುಪಿ: ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ ಸಿಕ್ಕಿದೆ. ದೀಪ ಬೆಳಗಿಸುವ ಮೂಲಕ ಧರ್ಮ ಸಂಸದ್​ಗೆ ಆರ್​ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಚಾಲನೆ ನೀಡಿದರು. ಮೊದಲ ದಿನದ ಧರ್ಮ ಸಂಸದ್​ನಲ್ಲಿ ವಿಶೇಷವಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಉಪಸ್ಥಿತರಿದ್ದರು. ಹಿರಿಯ, ಕಿರಿಯ ಪೇಜಾವರ ಶ್ರೀಗಳು, ಆದಿಚುಂಚನಗಿರಿಶ್ರೀ, ಸುತ್ತೂರುಶ್ರೀ, ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರವೀಣ್ ತೊಗಾಡಿಯಾ ಸೇರಿದಂತೆ ನೂರಾರು ಸ್ವಾಮೀಜಿಗಳ ವೇದಿಕೆಯಲ್ಲಿ ಉಪಸ್ಥಿತಿರಿದ್ದಾರೆ. ಡಾ.ಕಲ್ಲಡ್ಕ ಪ್ರಭಾಕರ್...
ಸುದ್ದಿ

ದ.3ಕ್ಕೆ ದತ್ತಪೀಠ ಪಾದುಕೆ ದರ್ಶನ | ದತ್ತಪೀಠ ಹಿಂದೂಗಳ ಆರಾಧನಾ ಕೇಂದ್ರ – ಮರಳಿಕೃಷ್ಣ ಹಸಂತ್ತಡ್ಕ

  ಪುತ್ತೂರು : ಬಜರಂಗದಳದ ವತಿಯಿಂದ ಕಳೆದ 17 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದತ್ತಪೀಠ ಉತ್ಸವ ಕಾರ್ಯಕ್ರಮಕ್ಕೆ ದ.3 ರಂದು ದತ್ತ ಪಾದುಕೆ ದರ್ಶನ ನಡೆಯಲಿದೆ.ಈ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳಾಗಿ ಅಲ್ಲಿಗೆ ತೆರಳಲಿದ್ದೇವೆ.ದ.2ರಂದು ಪುತ್ತೂರು,ಬಂಟ್ವಾಳ,ಉಜಿರೆಯಲ್ಲಿ ಸಂಜೆ ದತ್ತ ಸಂಕೀರ್ತನೆ ಮಾಡಿ ದತ್ತಪೀಠಕ್ಕೆ ಸುಮಾರು 5 ಸಾವಿರ ದತ್ತಮಾಲಾಧಾರಿಗಳು ತೆರಳಲಿದ್ದೇವೆ ಎಂದು ಬಜರಂಗದ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ. ಪತ್ರಕಾಗೋಷ್ಠಿಯಲ್ಲಿ ವಿಶ್ವಹಿಂದೂ...
1 3,254 3,255 3,256 3,257 3,258 3,290
Page 3256 of 3290