ಬೆಂಗಳೂರಲ್ಲಿ ನಟಿ ಬಿ. ಸರೋಜಾದೇವಿ ಪುತ್ಥಳಿ ನಿರ್ಮಿಸುವಂತೆ CM ಸಿದ್ದರಾಮಯ್ಯಗೆ ಮಾಜಿ ಸಂಸದೆ ಸುಮಲತಾ ಪತ್ರ.! -ಕಹಳೆ ನ್ಯೂಸ್
ಬೆಂಗಳೂರು : ನಟಿ ಬಿ. ಸರೋಜಾದೇವಿ ಪುತ್ಥಳಿ ನಿರ್ಮಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ನಟಿ, ಭಾರತೀಯ ಚಿತ್ರರಂಗದ ಖ್ಯಾತನಾಮರಾದ ಶ್ರೀಮತಿ ಬಿ. ಸರೋಜಾದೇವಿ ಅವರು ದಿನಾಂಕ 14 ಜುಲೈ 2025 ರಂದು ನಮ್ಮನ್ನು ಅಗಲಿದ್ದಾರೆ. ಅವರ ನಿಧನವು ಕರ್ನಾಟಕಕ್ಕೆ ಮಾತ್ರವಲ್ಲ, ಭಾರತೀಯ ಚಿತ್ರರಂಗಕ್ಕೆ ಸಹ ತುಂಬಲಾರದ ನಷ್ಟವಾಗಿದೆ. ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ...







