Tuesday, March 10, 2026

ಬೆಂಗಳೂರು

ಬೆಂಗಳೂರು

ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳೊಂದಿಗೆ ಶಾಮೀಲು; ಸಿದ್ದರಾಮಯ್ಯ ಗಂಭೀರ ಆರೋಪ- ಕಹಳೆ ನ್ಯೂಸ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರದ ವಿರುದ್ಧ ಒಂದಲ್ಲ ಒಂದು ಆರೋಪವನ್ನು ಮಾಡುತ್ತಲೇ ಇದ್ದಾರೆ. ಇದೀಗ ಖಾಸಗಿ ಶಾಲೆಗಳ ಜೊತೆಗೆ ಬಿಜೆಪಿ ಸರ್ಕಾರ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತ್ತು ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲದಂತಾಗಿದೆ. ಶಾಲೆಗಳು ಆರಂಭಗೊಳ್ಳದಿದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ‌ ಮಾಡಲಾಗುತ್ತಿದೆ. ಅಲ್ಲದೆ, ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ, ಪೋಷಕರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಇಷೇಲ್ಲ ನಡೆದರೂ ಸರ್ಕಾರ ಮಾತ್ರ...
ಬೆಂಗಳೂರು

ಡಿಕೆಶಿಗೆ ಹೆದರಿಕೊಂಡು ಸಿದ್ದರಾಮಯ್ಯನವರು ಮಾತಾನಾಡುತ್ತಿದ್ದಾರೆ; ಸದಾನಂದ ಗೌಡ- ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಹೆದರಿಕೊಂಡು ಏನೇನೋ ಮಾತಾನಾಡುತ್ತಿದ್ದಾರೆ ಎಂದು ಹೇಳಿದ್ರು. ಈ ಕುರಿತು ಸಿದ್ದರಾಮಯ್ಯ ಹಾಗೂ ಎಚ್ ಡಿಕೆ ನಡುವಿನ ಮಾತಿನ ಜಗಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಆಡಳಿತ ನಡೆಸಿದವರು ಮತ್ತು ಒಂದು ಪಕ್ಷದ ನೇತೃತ್ವ ವಹಿಸಿದವರು ಮಾತನಾಡುವಾಗ ಅದಕ್ಕೆ ಇತಿಮಿತಿ ಇರಬೇಕು.ಇಲ್ಲ ಸಾರ್ವಜನಿಕರಲ್ಲಿ ಅವರು ಒಪ್ಪಿಗೆ ಪಡೆಯುವ ರೀತಿ ಇರಬೇಕು. ಆದರೆ...
ಬೆಂಗಳೂರು

ಸಾರ್ವಜನಿಕರಿಗೆ ಬಿಗ್ ಶಾಕ್ ಕೊಟ್ಟ ಅಡುಗೆ ಎಣ್ಣೆ ಬೆಲೆ -ಕಹಳೆ ನ್ಯೂಸ್

ಬೆಂಗಳೂರು: ದೇಶದ ಜನತೆಗೆ ಕೊರೊನಾ ಬಿಕ್ಕಟ್ಟಿನ ನಡುವೆ ಮತ್ತೊಂದು ಆತಂಕ ಎದುರಾಗಿದ್ದು, ಶೇ.35 ರಿಂದ 45ರಷ್ಟು ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಲಾಕ್ ಡೌನ್ ಗೂ ಮುನ್ನ ಪ್ರತಿ ‌ಲೀಟರ್ ಗೆ 100 ರೂಪಾಯಿ ಕಡಿಮೆ ಇದ್ದ ಅಡುಗೆ ಎಣ್ಣೆ ಬೆಲೆ ಇದೀಗ ದಿಡೀರ್ ಹೆಚ್ಚಾಗಿದ್ದು, ರೂಪಾಯಿ 130 ರಿಂದ 140 ರೂಪಾಯಿವರೆಗೆ ಹೆಚ್ಚಾಗಿದೆ. ಆರು ತಿಂಗಳ ಹಿಂದೆ ಪಾಮ್ ಆಯಿಲ್ ಬೆಲೆ ಪ್ರತಿ ಲೀಟರ್ ಗೆ 65 ರಿಂದ...
ಬೆಂಗಳೂರು

ಸಾವಿನಲ್ಲೂ‌ ಐವರಿಗೆ‌ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಮಹಿಳೆ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಗೊಂಡ ಕಾರಣ ಅಂಗಾಂಗ ಕಸಿ ಕೂಡ ಆರಂಭಗೊಂಡಿದೆ. ಇಂತಹ ಸಂದರ್ಭದಲ್ಲಿ ನಗರದ ಕೋಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಂತ 49 ವರ್ಷದ ಮಹಿಳೆಯೊಬ್ಬಳು, ಐವರಿಗೆ ಅಂಗಾಂಗ ದಾನ ಮಾಡಿ ಆಸರೆಯಾಗಿದ್ದು, ಸಾವಿನಲ್ಲೂ‌ ಸಾರ್ಥಕತೆ ಮೆರೆದಿದ್ದಾಳೆ. ಯಲಹಂಕ ನಿವಾಸಿಯಾಗಿದ್ದ ಅವರು, ಡಿಸೆಂಬರ್ 13 ರಂದು ರಸ್ತೆ ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಮಹಿಳೆಗೆ ಕೃತಕ ಉಸಿರಾಟದ...
ಬೆಂಗಳೂರು

ಜಾಹಿರಾತಿನ ಮೂಲಕ ಮತ್ತೆ ತೆರೆ ಮೇಲೆ ಬಂದ ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ- ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಕೊನೆಯ ಬಾರಿ ಸಂತು ಸ್ಟ್ರೇಟ್ ಫಾರ್ವರ್ಡ್ ಸಿನೆಮಾದಲ್ಲಿ ‌ತೆರೆ ಮೇಲೆ ಕಾಣಿಸಿಕೊಂಡಿದ್ದು, ಇದೀಗ ಎಣ್ಣೆಯ ಜಾಹೀರಾತೊಂದರಲ್ಲಿ ಮತ್ತೆ ಜೊತೆಯಾಗಿ ನಟಿಸಿ, ಅಭಿಮಾನಿಗಳ ನಿರೀಕ್ಷೆಯನ್ನು ನಿಜಗೊಳಿಸಿದ್ದಾರೆ. ಹಾಗೆಯೇ ಗಂಡ ಹೆಂಡತಿ ಜೊತೆಯಾಗಿ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾಧಿಕ ನಾಲ್ಕು ವರ್ಷಗಳ ಬಳಿಕ ನನ್ನ ನೆಚ್ಚಿನ ಸಹನಟನ ಜೊತೆ ನಟಿಸಿದ್ದಕ್ಕೆ ತುಂಬಾನೇ ಸಂತೋಷವಾಗಿದೆ, ಅಷ್ಟೇ ಖುಷಿ ನಿಮಗೂ...
ಬೆಂಗಳೂರು

ಡಿವೈಎಸ್ಪಿ ಲಕ್ಷ್ಮೀ ಸಾವಿನ ಬೆನ್ನಲ್ಲೇ ನೇಣಿಗೆ ಶರಣಾದ ಪೊಲೀಸ್ ದಂಪತಿಗಳು-ಕಹಳೆ ನ್ಯೂಸ್

ಬೆಂಗಳೂರು: ಸಿಐಡಿ‌ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಬಳಿಕ ಇದೀಗ ‌ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಪೊಲೀಸ್ ದಂಪತಿಗಳಾದ ಎಚ್.ಸಿ. ಸುರೇಶ್ ಮತ್ತು ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನ್ ಸ್ಟೆಬಲ್ ಗಳಾಗಿದ್ದ ಇವರಿಬ್ಬರು ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು, ಆದರೆ ಅವರಿಗೆ ಮಕ್ಕಳಿರಲಿಲ್ಲ ಎಂಬ ಕೊರಗು ಯಾವಾಗಲೂ ಇತ್ತು ಎನ್ನಲಾಗಿದೆ. ಇನ್ನು ಕರ್ತವ್ಯ ನಿರ್ವಹಿಸಿ‌ ಮನೆಗೆ ಹೋದ ಸುರೇಶ್ ಮತ್ತು ಶೀಲಾ , ಇಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ...
ಬೆಂಗಳೂರು

ಶಾಲೆ ಪುನರಾಂಭದ ಬಗ್ಗೆ ನಾಳೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿ ತರಗತಿಗಳ ಪುನಾರಾರಂಭಕ್ಕೆ ಸಂಬಂಧಪಟ್ಟಂತೆ ನಾಳೆ ಸಿ.ಎಂ.ಬಿಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆ ನಾಳೆ ಮಧ್ಯಾಹ್ನ ಕೃಷ್ಣಾದಲ್ಲಿ ನಡೆಯಲ್ಲಿದ್ದು, ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಹಾಗೆ ನಾಳೆ ನಡೆಯುವ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯು ತರಗತಿಗಳ ಸ್ಥಿತಿಗತಿ ನೋಡಿಕೊಂಡು ಇನ್ನುಳಿದ ತರಗತಿಗಳನ್ನು ಪುನರಾರಂಭ ಮಾಡುವ...
ಬೆಂಗಳೂರು

ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮವನ್ನು ಸರಳವಾಗಿ ಆಚರಿಸಲು ಸರ್ಕಾರದ ಆದೇಶ- ಕಹಳೆ ನ್ಯೂಸ್

ಬೆಂಗಳೂರು:ರಾಜ್ಯದಲ್ಲಿ ಕೊರೋನಾ ಸೋಂಕು ಸದ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿರುವಂತೆಯೇ ಇದೀಗ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಾಮಾಜಿಕ ಆಚರಣೆ ಬಂದಿದೆ. ಈ ವೇಳೆ ಎಚ್ಚರಿಕೆಯಿಂದ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯನ್ನು ಸರಳ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ಭಾಸ್ಕರ ಅವರು ಸುತ್ತೋಲೆಯನ್ನ ಹೊರಡಿಸಿದ್ದಾರೆ. ಆಚರಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಜನರು ಸೇರುವ ಸಾಧ್ಯತೆಗಳಿವೆ. ಹೀಗಾಗಿ ಸಾರ್ವಜನಿಕ...
1 203 204 205 206 207 211
Page 205 of 211