ಶಬರಿಮಲೆ ಚಿನ್ನದ ಹಗರಣ: ಟಿಡಿಬಿ ಮಾಜಿ ಅಧಿಕಾರಿ ಬಂಧನ – ಕಹಳೆ ನ್ಯೂಸ್
ನವದೆಹಲಿ: ಶಬರಿಮಲೆ ಚಿನ್ನ ನಷ್ಟ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್ಐಟಿ ಬುಧವಾರ ಟಿಡಿಬಿಯ ಮಾಜಿ ಆಡಳಿತ ಅಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಹೇಳಿದ್ದ ಕೇರಳ ಹೈಕೋರ್ಟ್, ಶ್ರೀಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೇವಲ ಎರಡು ವಾರಗಳ ನಂತರ ಅವರ ಬಂಧನವಾಗಿದೆ. ಶ್ರೀ ಕುಮಾರ್ ಜೊತೆಗೆ, ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಕಾರ್ಯದರ್ಶಿ ಎಸ್. ಜಯಶ್ರೀ ಅವರ ನಿರೀಕ್ಷಣಾ ಜಾಮೀನು...







