Wednesday, March 18, 2026

ರಾಜ್ಯ

ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಗೋಹತ್ಯೆ ತಡೆಯುವ ನೆಪದಲ್ಲಿ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರ ಪ್ರವೇಶ : ಪುನೀತ್ ಕೆರೆಹಳ್ಳಿ ವಿರುದ್ಧ ಗೃಹ ಸಚಿವರು, ಐಜಿಪಿಗೆ ದೂರು -ಕಹಳೆ ನ್ಯೂಸ್

ಬೆಂಗಳೂರು : ಗೋಹತ್ಯೆಯನ್ನು ತಡೆಯುವ ನೆಪದಲ್ಲಿ ನಗರದ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸಿರುವ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಕೀಲರು, ಸಾಮಾಜಿಕ ಕಾರ್ಯಕರ್ತರ ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ದೂರು ಸಲ್ಲಿಸಿದೆ. ಜೂ.7ರಂದು ಬಕ್ರೀದ್ ಹಬ್ಬಕ್ಕೂ ಮುಂಚಿತವಾಗಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ನಗರದ ಟ್ಯಾನರಿ ರಸ್ತೆ, ಅಹ್ಮದ್‍ನಗರ ಮತ್ತು ಶಿವಾಜಿನಗರದಲ್ಲಿರುವ ಮುಸ್ಲಿಮರ...
ಕೇರಳಜಿಲ್ಲೆರಾಜ್ಯಸುದ್ದಿ

2 ಶತಮಾನಗಳ ಬಳಿಕ ಪದ್ಮನಾಭ ದೇಗುಲ ಮಹಾಕುಂಭಾಭಿಷೇಕ -ಕಹಳೆ ನ್ಯೂಸ್

ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 2 ಶತಮಾನಗಳ ಬಳಿಕ ಮಹಾ ಕುಂಭಾಭಿಷೇಕ ನಡೆದಿದ್ದು, ಭಾನುವಾರ ಭಕ್ತರು ಈ ಅಪರೂಪದ ಆಚರಣೆಯನ್ನು ಕಣ್ತುಂಬಿಕೊಂಡರು. ಸಾಕಷ್ಟು ಸಮಯದಿಂದ ವಿಳಂಬವಾಗಿದ್ದ ಈ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯವು ಇತ್ತೀಚೆಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 270 ವರ್ಷಗಳ ಬಳಿಕ ಈ ಅದ್ದೂರಿ ಮಹಾಕುಂಭಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ಭಾನುವಾರ ಬೆಳಗ್ಗೆ ದೇವಾಲಯದ ಆವರಣದಲ್ಲೇ ಇರುವ ತಿರುವಾಂಬಾಡಿ ಕೃಷ್ಣ ದೇಗುಲಕ್ಕೆ ಅಷ್ಟಬಂಧ ಕಳಶ ಸ್ಥಾಪನೆ, ವಿಶ್ವಕಸೇನಾ...
ಕೇರಳಜಿಲ್ಲೆರಾಜ್ಯ

ಕೇರಳದಲ್ಲಿ ಒಂದೇ ಗುಂಡಿಯಲ್ಲಿ ಸಿಲುಕಿದ್ದ ಹುಲಿ, ನಾಯಿ: ರಕ್ಷಣೆ -ಕಹಳೆ ನ್ಯೂಸ್

ಇಡುಕ್ಕಿ: ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿನ ಮಯಿಲದುಂಪರೈ ಎಂಬಲ್ಲಿ 9 ಅಡಿ ಆಳದ ಗುಂಡಿಯೊಂದರೊಳಗೆ ನಾಯಿ ಮತ್ತು ಹುಲಿಯೆರಡೂ ಸಿಲುಕಿದ್ದು, ಅವನ್ನು ಅರಣ್ಯ ಇಲಾಖೆ ಭಾನುವಾರ ರಕ್ಷಿಸಿದೆ. ನಾಯಿಯನ್ನು ಹುಲಿಯು ಬೆನ್ನಟ್ಟಿದ್ದ ವೇಳೆ ಇರಡೂ ಗುಂಡಿಯೊಳಗೆ ಬಿದ್ದಿವೆ ಎನ್ನಲಾಗಿದ್ದು, ಹುಲಿ ಹಾಗೂ ನಾಯಿ ಎರಡಕ್ಕೂ ಅರವಳಿಕೆ ಮದ್ದು ನೀಡಿ ಅವನ್ನು ಶಾಂತಗೊಳಿಸಿ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಎರಡೂ ಪ್ರಾಣಿಗಳು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಇನ್ನು ರಕ್ಷಣೆಯ ಬಳಿಕ ಹುಲಿಯನ್ನು...
ಜಿಲ್ಲೆರಾಜ್ಯಸುದ್ದಿ

ಭಿಕ್ಷೆ ಬೇಡಲು ನಿರ್ಧಾರ ಮಾಡಿರುವ 108 ಆಂಬುಲೆನ್ಸ್ ಸಿಬ್ಬಂದಿಗಳು-ಕಹಳೆ ನ್ಯೂಸ್

ಸರಕಾರದಿಂದ ನೇಮಿಸ್ಪಟ್ಟ 108 ಆಂಬುಲೆನ್ಸ್ ಸೇವೆಯ ಜವಾಬ್ದಾರಿ ಹೊತ್ತಿರುವ ಗ್ರೀನ್ ಹೆಲ್ತ್ ಸರ್ವಿಸ್ ಕಳೆದ ಎರಡು ವರ್ಷಗಳಿಂದ ಸಿಬ್ಬಂದಿಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಸರಿಯಾದ ಸಮಯಕ್ಕೆ ವೇತನ ನೀಡದೆ, ಈ ಹಿಂದೆ ನೀಡುತ್ತಿದ್ದ ರೂ 36000 ವೇತನವನ್ನು ರೂ 15000ಕ್ಕೆ ಕಡಿತ ಮಾಡಿದ್ದು ಅಲ್ಲದೆ, ಅದನ್ನು ಸರಿಯಾದ ಸಮಯಕ್ಕೆ ನೀಡದೆ ಇರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆ ಸಿಬ್ಬಂದಿಗಳ ಪಾಲಿಗೆ ಕಷ್ಟಕರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡು...
ರಾಜ್ಯಸುದ್ದಿ

ರಾಜ್ಯಾದ್ಯಂತ ಇಂದಿನಿಂದ ಮಾನ್ಸೂನ್ ಮಳೆ : ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ..! – ಕಹಳೆ ನ್ಯೂಸ್

ರಾಜ್ಯದಲ್ಲಿ ಇಣದಿನಿಂದ ಮುಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಕೆಲ ದಿನಗಳಿಂದ ಮಂದಗತಿಯಲ್ಲಿದ್ದ ಮುಂಗಾರು ಇಂದಿನಿಂದ ರಾಜ್ಯಾದ್ಯಂತ ತೀವ್ರವಾಗಿ ಅಬ್ಬರಿಸಲಿದೆ. ಉತ್ತರ ಕರ್ನಾಟಕ, ಕರಾವಳಿ, ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 11 ಜಿಲ್ಲೆಗಳಿಗೆ ಯೆಲ್ಲೊ ಎಚ್ಚರಿಕೆ ಘೋಷಿಸಲಾಗಿದೆ. ಕೃಷ್ಣಾ ನದಿಯ ತೀರದ ಜನರಿಗೆ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ, ಏಕೆಂದರೆ ಜಲಾಶಯಗಳಿಂದ...
ಬೆಂಗಳೂರುರಾಜ್ಯಸುದ್ದಿಹಾಸನ

‘ಇಲ್ಲೇ ಓಡಾಡ್ತಿದ್ದ, ಈಗ ಮಲಗಿದ್ದಾನೆ..’ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿದ ಭೂಮಿಕ್‌ ತಂದೆ ಲಕ್ಷ್ಮಣ್‌!

ಹಾಸನ (ಜೂ.7): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವು ಕಂಡಿದ್ದರು. ಈ ವೇಳೆ ಹಾಸನದ ಬೇಲೂರಿನ ಭೂಮಿಕ್ ಕೂಡ ಸಾವು ಕಂಡಿದ್ದ. ಮೃತದೇಹವನ್ನು ಅವರ ಮನೆಯ ಸಮೀಪದ ಜಾಗದಲ್ಲಿ ಮಣ್ಣು ಮಾಡಲಾಗಿತ್ತು. ಶನಿವಾರ ಭೂಮಿಕ್‌ನ ತಂದೆ ಲಕ್ಷ್ಮಣ್‌ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿ, ಗೋಳಾಡಿದ್ದಾರೆ. ಮಗನ ಸಮಾಧಿ ತಬ್ಬಿ ಕಣ್ಣೀರು ಹಾಕಿದ್ದು, ನನಗೆ ನನ್ನ ಮಗ ಬೇಕು ಅಯ್ಯೋ..ನನ್ನ ಮಗ ಎಲ್ಲೋದ? ಎಂದು...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

‘ಬೆಂಗಳೂರು ಕಾಲ್ತುಳಿತ ದುರಂತ’ ಪ್ರಕರಣದ ತನಿಖೆ ‘CID’ಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ -ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ಕಾಲ್ತುಳಿತ ದುರಂತ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕಾಲ್ತುಳಿತ ದುರಂತ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಡಿಜಿ & ಐಜಿಪಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ KSCA ಪದಾಧಿಕಾರಿಗಳು ಹೈಕೋರ್ಟ್ ಮೊರೆಹೋಗಿದ್ದು, ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೆ ಎಸ್ ಸಿಎ ಆಡಳಿತ ಮಂಡಳಿ ಅಧ್ಯಕ್ಷ ರಘುರಾಮ್ ಭಟ್ , ಕಾರ್ಯದರ್ಶಿ ಎಂ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ದುರಂತ ಸಂಭವಿಸಿರಲಿಲ್ಲ: ಕಂಬನಿ ಮಿಡಿದ ಗೃಹ ಸಚಿವ ಪರಮೇಶ್ವರ್ -ಕಹಳೆ ನ್ಯೂಸ್

ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ದುರಂತ ಸಂಭವಿಸಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರೊನಲ್ಲಿ ಸುದ್ದಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಬಕ್ಕೆ ದು:ಖ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ಘಟನೆ...
1 82 83 84 85 86 273
Page 84 of 273