ಕರ್ನೂಲ್ `ಖಾಸಗಿ ಬಸ್ ಅಗ್ನಿ ದುರಂತ’ದಲ್ಲಿ ಬೆಂಗಳೂರಿನ ಯುವತಿ ಸಜೀವ ದಹನ.!- ಕಹಳೆ ನ್ಯೂಸ್
ಬೆಂಗಳೂರು : ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಸಂಭವಿಸಿದ ಖಾಸಗಿ ಬಸ್ ಅಗ್ನಿ ದುರಂತದಲ್ಲಿ ಬೆಂಗಳೂರಿನ 22 ವರ್ಷದ ಯುವತಿ ಸಜೀವ ದಹನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಯಾದ್ರಾದಿಯ ನಿವಾಸಿ 22 ವರ್ಷದ ಅನುಷಾ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿ ನಿನ್ನೆ ರಾತ್ರಿ ಬಸ್ ಹತ್ತಿದ್ದರು. ಇಂದು ಮುಂಜಾನೆ ಕರ್ನೂಲ್ ಹೊರವಲಯದ ಉಳಿಂದಪಾಡು ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ...







