ಆದ್ಯ ಸುಲೋಚನಾ ಮುಳಿಯ ನೇತೃತ್ವದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿ ಪುತ್ತೂರಿನ ವಿದ್ಯಾರ್ಥಿಗಳಿಂದ ಸಮಾಜಮುಖಿ ಚಿಂತನೆಗೆ ನಾಂದಿ – ಕಹಳೆ ನ್ಯೂಸ್
ಪುತ್ತೂರು, ಡಿ.16 : ಕೇಶದಾನದಿಂದ ಕ್ಯಾನ್ಸರ್ ಕಾರಣದಿಂದಾಗಿ ರೂಪ ಕಳೆದುಕೊಂಡ ರೋಗಿಗಳಿಗೆ ವಿಗ್ ನೀಡುವುದರ ಮೂಲಕ ಅವರ ಮುಖದಲ್ಲಿ ಮಂದಹಾಸ ತರಬಹುದು. ರಕ್ತದಾನ, ಅಂಗದಾನ ಇದರಂತೆ ಕೇಶದಾನ ಮಾಡುವ ನಿಟ್ಟಿನಲ್ಲಿ ಪುತ್ತೂರಿನ 9 ಶಾಲಾ ವಿದ್ಯಾರ್ಥಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಕೇಶದಾನ ಮಾಡುವ ಅಪರೂಪದ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದು ಇದು ಉತ್ತಮ ಯೋಜನೆಯಾಗಿ ಹೊರಹೊಮ್ಮಿದೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಆದ್ಯ ಸುಲೋಚನಾ ಮುಳಿಯ ಎಂಬ ಕುವರಿಯು...







