ಕಾರ್ಕಳ ಬೈಲೂರಿನಲ್ಲಿ ಪರಶುರಾಮರ ಕಂಚಿನ ಪ್ರತಿಮೆ ಜನವರಿಯಲ್ಲಿ ಲೋಕಾರ್ಪಣೆ – ಕಹಳೆ ನ್ಯೂಸ್
ಕಾರ್ಕಳ: ಪರಶುರಾಮರ ಕಂಚಿನ ಪ್ರತಿಮೆ ಒಳಗೊಂಡ ಪಾರ್ಕ್ ಅನ್ನು ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ನಿರ್ಮಿಸಲಾಗುತ್ತಿದ್ದು ಬಹುತೇಕ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿವೆ. ಜನವರಿ ಯಲ್ಲಿ ಪ್ರತಿಮೆಯ ಲೋಕಾರ್ಪಣೆ ನಡೆಯಲಿದೆ. ಉಡುಪಿ-ಕಾರ್ಕಳ ಹೆದ್ದಾರಿ ಮಧ್ಯೆ ಬರುವ ಬೈಲೂರಿನಲ್ಲಿ 10 ಕೋ.ರೂ. ಅಧಿಕ ವೆಚ್ಚದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಒಳಗೊಂಡ ಪಾರ್ಕ್ ರಚಿಸಲಾಗುತ್ತಿದೆ. ಪಾರ್ಕ್ ರಚನೆಗೆ ಸಂಬಂಧಿಸಿ ಕಟ್ಟಡಗಳ ಫೌಂಡೇಶನ್, ಗೋಡೆ ನಿರ್ಮಾಣ ಕೆಲಸ ಪೂರ್ಣಗೊಂಡು, ಆಡಿಯೋ ವಿಶುವಲ್ ಕೊಠಡಿಯೊಂದಿಗೆ...







