ದರ್ಶನ್ ಕೊಲೆ ಪ್ರಕರಣ ಸಂಬಂಧ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಪೊಲೀಸ್ ನೋಟೀಸ್ ನೀಡುವ ಸಾಧ್ಯತೆ?! -ಕಹಳೆ ನ್ಯೂಸ್
ಬೆಂಗಳೂರು : ಇತ್ತೀಚಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಚಲನಚಿತ್ರ ನಟ ಬಾಕ್ಸ್ ಆಫೀಸ್ ಸುಲ್ತಾನ ಚಾಲೇಂಜಿಂಗ್ ಸ್ಟಾರ್ ಎಂದೇ ಖ್ಯಾತಿಗಳಿಸಿದ್ದ ತೂಗುದೀಪ ದರ್ಶನ್ ಅವರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧ ದಿನೇ ದಿನೇ ಒಂದಲ್ಲಾ ಒಂದು ಟ್ವಿಸ್ಟ್ ಪಡೆಯುತ್ತಾ ಹೋಗುತ್ತಿದೆ. ಏತನ್ಮಧ್ಯೆ ಕೊಲೆಯಾದ ದಿನದಂದು ದರ್ಶನ್ ಅವರು ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಜೊತೆಗೂಡಿ ಸ್ಟೋನಿ ಬ್ರೂಕ್ ಎಂಬ ಪಬ್ ನಲ್ಲಿ ಪಾರ್ಟಿ ಮಾಡಿರುವ ಬಗ್ಗೆ ಸಾಕ್ಷಿಗಳನ್ನು...







