Thursday, March 12, 2026
ಸುದ್ದಿ

ಕಾಡುಹಂದಿ ಬೇಟೆಯಾಡಿ ಮಾಂಸ ಮಾರಾಟ: ಆರೋಪಿಗಳ ಬಂಧನ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

ಕಡೂರು ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿನ ಕೆರೆ ಏರಿ ಮೇಲೆ ಮೂರು ಕಾಡು ಹಂದಿಯ ಮಾಂಸವನ್ನು ಏಳುಮಂದಿ ಮಾರಾಟ ಮಾಡುತ್ತಿದ್ದರು. ಈ ವೇಳೆಯಲ್ಲಿ ಚಿಕ್ಕಮಗಳೂರು ಮತ್ತು ಕಡೂರು ಅರಣ್ಯಾಧಿಕಾರಿಗಳು ಜಂಟಿಯಾಗಿ ದಾಳಿಯನ್ನು ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ರವಿ, ಪ್ರತಾಪ, ಜಯಣ್ಣ, ಮಾರಪ್ಪ, ಮಂಜುನಾಥ್, ಮಂಜಪ್ಪ, ನಂಜಪ್ಪ ಎಂಬುವವರು ದೊಡ್ಡಸಾಗರ ಮತ್ತು ಶಿವಪುರ ಗ್ರಾಮದ ವ್ಯಕ್ತಿಗಳಾಗಿದ್ದು, ಈ ಏಳು ಮಂದಿ ಬಂಧಿತ ಆರೋಪಿಗಳು. ಇವರಿಂದ 50 ಕೆ.ಜಿ. ಹಂದಿ ಮಾಂಸ ಹಾಗೂ ಬೊಲೆರೋ ಪಿಕ್ ಹಪ್ ವಾಹನ, ಎರಡು ಬೈಕ್‍ಗಳನ್ನು ವಶಪಡಿಸಲಾಗಿದೆ. ಹಾಗೂ ಕಡೂರು ವಲಯದಲ್ಲಿ ಪ್ರಕರಣ ದಾಖಲಾಗಿದೆ.