
ಉಡುಪಿ ಜಿಲ್ಲಾನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ರಂಗ ಸಂಗಮ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ರಾಜು ಬಿ ತೋನ್ಸೆ, ಜಯರಾಂ ನೀಲಾವರ, ರಜನೀಕಾಂತ್ ಶಿರ್ವ ,ಕೆ ಕೆ ಸಾಲ್ಯಾನ್, ರಾಜುಸಾಲ್ಯಾನ್ ಕಲ್ಲೊಟ್ಟೆ, ಶಿವಾನಿ ನವೀನ್ ಕೊಪ್ಪ, ರಾಜ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ‘ವಿದ್ದು’ ಉಚ್ಚಿಲ್ ನಿರ್ದೇಶನದಲ್ಲಿ ಜಿಲ್ಲೆಯ ವಿವಿಧ ತಂಡಗಳ ಕಲಾವಿದರು ಸೇರಿ ಆರು ನಾಟಕಗಳ ಆಯ್ದ ಭಾಗವನ್ನು ಅಭಿನಯಿಸಿದ್ದಾರೆ
ಇನ್ನು ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ,ಖ್ಯಾತ ಕಲಾವಿದ ನವೀನ್ ಡಿ ಪಡೀಲ್, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಉದ್ಯಮಿ ಹರಿಯಪ್ಪ ಕೋಟ್ಯಾನ್, ರಂಗ ಪೋಷಕ ವಿಶ್ವನಾಥ್ ಶೆಣೈ, ಒಕ್ಕೂಟದ ಅಧ್ಯಕ್ಷ ಲೀಲಾಧರ ಶೆಟ್ಟಿ ಪದಾಧಿಕಾರಿಗಳಾದ ಪ್ರಸನ್ನ ಶೆಟ್ಟಿ, ಜಯರಾಂ ಕಲ್ಯಾಣಿ, ಶರತ್ ಉಚ್ಚಿಲ, ಕಾರ್ತಿಕ್ ಕಡೇಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.















