
ಉಡುಪಿ: ಕುಂದಾಪುರದಲ್ಲಿ ಭಾರೀ ಆಲಿಕಲ್ಲು ಮಳೆಯಾದ ಘಟನೆ ಗೋಳಿಯಂಗಡಿ ಪ್ರದೇಶದಲ್ಲಿ ನಡೆದಿದೆ.
ನಿನ್ನೆ ಸಂಜೆ ಸುರಿದಿದ್ದ ಭಾರೀ ಮಳೆಯಲ್ಲಿ ಭಾರೀ ಗಾತ್ರದ ಆಲಿಕಲ್ಲು ನೋಡಿ ಜನರು ಬೆರಗಾಗಿದ್ದಾರೆ. ಮಂಜುಗಡ್ಡೆ ಮಾದರಿಯ ಬೃಹತ್ ಆಲಿಕಲ್ಲುಗಳನ್ನು ಕೈಯಲ್ಲಿ ಹಿಡಿದು ಸ್ಥಳೀಯರು ಫೋಟೋ ತೆಗೆದು ಪ್ರಕೃತಿ ವಿಸ್ಮಯಕ್ಕೆ ಗೋಳಿಯಂಗಡಿ ಪ್ರದೇಶದ ಜನರು ಪುಳಕೊಂಡ ಘಟನೆ ನಡೆದಿದೆ.
















