

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ವಾಹನಕ್ಕೆ ಅಭ್ಯರ್ಥಿ ಡಾ ಭರತ್ ಶೆಟ್ಟಿ ವೈ ಅವರು ಕಾವೂರಿನಲ್ಲಿ ಚಾಲನೆ ನೀಡಿದರು.
ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಕ್ಷೇತ್ರ ಪ್ರಭಾರಿ ಕೃಷ್ಣದಾಸ್, ಮಂಡಲಪ್ರಭಾರಿ ಕೃಷ್ಣಶೆಟ್ಟಿ ಕಡಬ, ಮುಖಂಡರು, ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಮೋರ್ಚಾಗಳ ಪ್ರಮುಖರು, ಮತ್ತು ಇತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.















