
ಸುಳ್ಯ : ಮನೆಯೊಂದರ ಮೇಲೆ ಮರ ಬಿದ್ದು ಮನೆಮಂದಿಗೆ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕ ಎಂಬಲ್ಲಿ ನಡೆದಿದೆ.
ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಅವರ ಮನೆಗೆ ರಾತ್ರಿ ವೇಳೆ ಮರ ಬಿದಿದ್ದು, ಮನೆಯೊಳಗೆ ಮಲಗಿದ್ದ ಮನೆ ಮಂದಿಯ ಮೇಲೆ ಮೇಲ್ಛಾವಣಿಯ ಹಂಚು ಬಿದ್ದು ಗಾಯಗಳಾಗಿದೆ. ಮನೆಮಂದಿಯನ್ನ ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ..
ಇನ್ನು ಮರ ಬಿದ್ದ ಪರಿಣಾಮ ಮನೆ ಮೇಲ್ಛಾವಣಿಯ ಹಂಚು ಮತ್ತು ಪಕಾಸ್, ರೀಪ್ ತುಂಡಾಗಿ ಭಾರಿ ನಷ್ಟ ಸಂಭವಿಸಿದೆ














