
ಕುಂದಾಪುರ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಇಲ್ಲಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸನೇತ ಭೇಟಿ ನೀಡಿದರು.
ಮೂಕಾಂಬಿಕಾ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸಿದ ಈಶ್ವರಪ್ಪ ಕುಟುಂಬ ಅಲ್ಲಿ ತುಲಾಭಾರ ಸೇವೆ ಮಾಡಿಸಿದ್ದಾರೆ. ಸೋಮವಾರವೇ ಇಲ್ಲಿಗಾಗಮಿಸಿದ ಈಶ್ವರಪ್ಪ ಹಾಗೂ ಕುಟುಂಬದವರು ಮಂಗಳವಾರ ಮುಂಜಾನೆ ಚಂಡಿಕಾ ಯಾಗದಲ್ಲಿ ಪಾಲ್ಗೊಂಡರು.















