ಪ್ರವೀಣ್ ನೆಟ್ಟಾರು ಮನೆಗೆ ಸಚಿವ ಎಸ್ ಅಂಗಾರ ಹಾಗೂ ಹಿಂದೂ ಕಾರ್ಯಕರ್ತರ ಸಹಕಾರದಲ್ಲಿ ನೀರಿನ ವ್ಯವಸ್ಥೆ – ಕಹಳೆ ನ್ಯೂಸ್

ಬೆಳ್ಳಾರೆ: ಬಿಜೆಪಿ ಪಕ್ಷಕ್ಕಾಗಿ ಹಾಗೂ ಹಿಂದೂ ಸಂಘಟನೆಗಾಗಿ ಪ್ರತೀ ಕ್ಷಣವೂ ತನ್ನನ್ನು ತಾನು ಅರ್ಪಿಸಿಕೊಂಡು ತನ್ನ ಮನೆಗೆ ಏನನ್ನೂ ಮಾಡಿಕೊಳ್ಳದ ಒಬ್ಬ ನಿಷ್ಠಾವಂತ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು. ನಿನ್ನೆ ಸಂಸದ ತೇಜಸ್ವಿ ಸೂರ್ಯ ಹಾಗೂ ಸಚಿವ ಎಸ್ ಅಂಗಾರ ಇವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕೊಳವೆಬಾವಿ ನಿರ್ಮಿಸಿ ಅದರ ಕಾರ್ಯ ಅರ್ಧದಲ್ಲೇ ಉಳಿದಿರುವುದನ್ನು ಸಚಿವ ಎಸ್ ಅಂಗಾರ ಹಾಗೂ ಹಿಂದೂ ಕಾರ್ಯಕರ್ತರು ಕಂಡು ಸಂಜೆಯೊಳಗಾಗಿ ಪ್ರವೀಣ್ ನೆಟ್ಟಾರು ಮನೆಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ

















