ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ತಂಡದಿಂದ ಸಾಮಾಜಿಕ ಕಾರ್ಯ : – ಕಹಳೆ ನ್ಯೂಸ್

ಪುತ್ತೂರು : ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ಗಡಿಕಲ್ಲು ವಾಸು ನಾಯ್ಕ ಇವರ ಮನೆಯ ಮೇಲ್ಛಾವಣಿಯನ್ನ ದುರಸ್ಥಿಗೊಳಿಸಿದ್ದಾರೆ.

ಹಲವು ವರುಷಗಳಿಂದ ಟರ್ಪಾಲಿನ ಮೇಲ್ಚಾವಣಿಯ ಮನೆಯಲ್ಲಿ ವಾಸಿಸುತ್ತಿದ್ದ ಇವರಿಗೆ ಸಿಮೆಂಟ್ ಶೀಟ್ ಅಳವಡಿಸುವ ಮೂಲಕ ದುರಸ್ತಿಗೊಳಿಸಿದ್ದಾರೆ.
ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ತಿಮ್ಮಪ್ಪ ಶೆಟ್ಟಿಯವರ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆದಿದ್ದು, ಈ ವೇಳೆ ಬಲ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು, ಅಧಿಕಾರಿ ವರ್ಗದವರು, ಹಾಗೂ ಬಲ್ನಾಡು ಗ್ರಾಮ ಪಂಚಾಯತ್ ಸರ್ವಸದಸ್ಯರು, ಅಯೋಧ್ಯೆ ಫ್ರೆಂಡ್ಸ್ ತಂಡದ ಸದಸ್ಯರು, ಸಹಕರಿಸಿದರು.














