ಬಿಜೆಪಿ ಧುರೀಣ ರಾಮ್ ಭಟ್ ನಿಧನ ; ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ, ಶಾಸಕರಿಂದ ಅಂತಿಮ ದರ್ಶನ – ನಾಳೆ ಬೆಳಗ್ಗೆ ಪುತ್ತೂರು ವರ್ತಕರ ಸಂಘದಿಂದ ಗೌರವಾರ್ಥ ಸ್ವಯಂ ಪ್ರೇರಿತ ಬಂದ್ – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಮಾಜಿ ಶಾಸಕ, ಬಿಜೆಪಿ ಭೀಷ್ಮ ರಾಮ್ ಭಟ್ ಅವರು ಇಂದು ಇಹಲೋಕ ತ್ಯಜಿಸಿದ್ದು ಸುದ್ದಿ ತಿಳಿದ ತಕ್ಷಣ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ ಅಂತಿಮ ದರ್ಶನ ಪಡೆದರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಜನಪ್ರತಿನಿದಿಗಳು ನಾಳೆ ವರ್ತಕರ ಸಂಘದಿಂದ ಕೆಲಗಂಟೆಗಳ ಕಾಲ ಸ್ವಯಂಪ್ರೇರಿತ ಬಂದ್ ಗೆ ನಿರ್ಧರಿಸಿದ್ದು ಪಾರ್ಥೀವ ಶರೀರವನ್ನು ಮುಂಜಾನೆ ವಿವೇಕಾನಂದ ಕಾಲೇಜಿಗೆ ನಂತರ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಬೆಳಿಗ್ಗೆ 9ರಿಂದ 10ಗಂಟೆಯ ತನಕ ಅವಕಾಶ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.














