ಶ್ರೀ ರಾಮ ಯುವಕ ಸಂಘ (ರಿ.) ಮುಚ್ಚೂರು ವತಿಯಿಂದ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಶ್ರೀ ರಾಮ ಯುವಕ ಸಂಘ (ರಿ.) ಮುಚ್ಚೂರು ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಕಾನದಲ್ಲಿ ಕುಡುಬಿ ಸಮುದಾಯದ ಬಂಧುಗಳು ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟವು ಉಯಿಂಲ್ಯೆಲೆ ಅಪ್ಪಯ್ಯ ಗೌಡ ಕ್ರೀಡಾಗದ್ದೆಯಲ್ಲಿ ನಡೆಯಿತು.


ಕ್ರೀಡಾ ಕೂಟದಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ ಹಾಗೂ ಯುವಕ ಮಂಡಲದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.














