
ಮೈಸೂರು: ಧಾರಾಕಾರ ಮಳೆಯ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಚಾಮುಂಡಿ ಬೆಟ್ಟದಿಂದ ನಂದಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿದ್ದು, ದಸರಾ ದೀಪಾಲಂಕಾರ “ಸುಸ್ವಾಗತ” ವಿದ್ಯುತ್ ಬೋರ್ಡ್ ಸಮೀಪದಲ್ಲಿ ಘಟನೆ ನಡೆದಿದೆ.

ರಾತ್ರಿ ಸುರಿದ ಭಾರಿ ಮಳೆಯಿಂದ ನಗರದ ಹಲವು ಕಡೆಗಳಲ್ಲಿ ರಸ್ತೆಗಳು ತುಂಬಿ ತುಳುಕಿದ್ದು, ಅಶೋಕ ರಸ್ತೆ, ದೊಡ್ಡ ಗಡಿಯಾದ ವೃತ್ತದಲ್ಲಿ ಮಳೆ ನೀರಿಗೆ ಮುಳುಗಿದ ದ್ವಿಚಕ್ರ ವಾಹನಗಳನ್ನು ಎಳೆಯಲು ಸವಾರರು ಪರದಾಡುತ್ತಿದ್ದರು.ಇನ್ನು ಪ್ರವಾಸಿಗರು ಹಾಗೂ ಭಕ್ತರು ಆ ರಸ್ತೆಯಲ್ಲಿ ಸಂಚರಿಸದಂತೆ ಸೂಚನೆಯನ್ನು ನೀಡಲಾಗಿದೆ.














