
ಉಡುಪಿ : ಶ್ರೀ ಕೃಷ್ಣನ ನೆಲೆಬೀಡಾಗಿರುವ ಉಡುಪಿಯಲ್ಲಿ ಕೃಷ್ಣಜನ್ಮಾಷ್ಟಮಿಗೆ ಅದರದ್ದೇ ಆದ ವೈಭವ-ಸಂಭ್ರಮ ಇದೆ. ಕೋವಿಡ್ನಿಂದಾಗಿ ಕೃಷ್ಣಜನ್ಮಾಷ್ಟಮಿಯ ವೈಭವ ವಿಜೃಂಭಣೆ ಇಲ್ಲದೆ ಸರಳವಾಗಿ, ಸಂಪ್ರದಾಯಬದ್ಧವಾಗಿ ನಡೆಯಲಿದ್ದು, ಸಂಕೇತವಾಗಿ ಉತ್ಸವವನ್ನು ಆಚರಿಸಲು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಯೋಚಿಸಿದ್ದು, ಮಠದೊಳಗಿನ ಧಾರ್ಮಿಕ ಆಚರಣೆಗಳು ಎಂದಿನಂತೆ ಸಂಪ್ರದಾಯ ಬದ್ಧವಾಗಿ ನಡೆಯುತ್ತವೆ. ಅಘ್ರ್ಯ ಪ್ರದಾನ, ರಥಬೀದಿಯಲ್ಲಿ ಲೀಲೋತ್ಸವ – ವಿಟ್ಲಪಿಂಡಿ ಉತ್ಸವ ನಡೆಸಲು ಸಿದ್ದತೆಗಳನ್ನು ನಡೆಸಲಾಗುತ್ತದೆ.














