Saturday, March 14, 2026
ಸುದ್ದಿ

ಮುಸ್ಲಿಂ ಯುವಕನೊಂದಿಗೆ ಖಾಸಗಿ ಬಸ್‍ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ ಯುವತಿ; ಪಂಪ್‍ವೆಲ್ ಬಳಿ ತಡೆದು ಪೊಲೀಸರಿಗೆ ಒಪ್ಪಿಸಿದ ಬಜರಂಗದಳ ಕಾರ್ಯಕರ್ತರು-ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‍ನಲ್ಲಿ ಮುಸ್ಲಿಂ ಯುವಕನೊಂದಿಗೆ ಇದ್ದ ಹಿಂದೂ ಯುವತಿಯನ್ನು ಗುರುವಾರ ರಾತ್ರಿ ನಗರದ ಪಂಪ್‍ವೆಲ್ ಬಳಿ ಬಜರಂಗದಳ ದಾಳಿ ನಡೆಸಿ ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಯುವಕನನ್ನು ಬೈಕಂಪಾಡಿ -ಜೋಕಟ್ಟೆ ನಿವಾಸಿ ಅಸ್ವಿದ್ ಅನ್ವರ್ ಮುಹಮ್ಮದ್ ಎಂದು ಗುರುತಿಸಲಾಗಿದೆ. ಹಾಗೂ ಮುಸಲ್ಮಾನ ಯುವಕನೊಂದಿಗೆ ಪರಾರಿಯಾಗುತ್ತಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ್ದಾರೆ. ಇದೀಗ ಕಳೆದ ಕೆಲವು ತಿಂಗಳಿಂದ ಇಂತಹ ಪ್ರಕರಣಗಳು ಪದೇ ಪದೇ ಹೆಚ್ಚುತ್ತಿದ್ದು, ಇದು ಲವ್ ಜಿಹಾದ್ ನಡೆಯುತ್ತಿದೆಯೋ ಅನ್ನೋ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ಜಾಹೀರಾತು
ಜಾಹೀರಾತು