Tuesday, March 10, 2026
ದಕ್ಷಿಣ ಕನ್ನಡಬೆಂಗಳೂರುಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ಯಥಾಸ್ಥಿತಿಗೆ ಹೈಕೋರ್ಟ್ ಆದೇಶ ; ಮಾಧ್ವ ಪದ್ದತಿಯಂತೆ ಶಿವರಾತ್ರಿ – ಕಹಳೆ ನ್ಯೂಸ್

ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿಯ ಕುರಿತಾಗಿ ಗೊಂದಲ ಏರ್ಪಟ್ಟಿತು. ಶಿವರಾತ್ರಿ ಆಚರಣೆ ಶೈವ ಮಾಧ್ವ ಪದ್ದತಿಯಂತೆ ನಡೆಯಬೇಕೆಂಬ ಜಟಾಪಟಿಯು ನಡೆದಿತ್ತು ಇದೀಗ ಉಮಾಮಹೇಶ್ವರಿ ಗುಡಿಯಲ್ಲಿ ಈ ಹಿಂದಿನಂತೆ ಪೂಜೆ ಅಭಿಷೇಕ ನಡೆಸುವುದಕ್ಕೆ ಮುಜರಾಯಿ ಇಲಾಖೆಗೆ ಹೈಕೊರ್ಟ್ ನಿರ್ದೇಶನ ನೀಡಿದೆ.

ಕಳೆದ ಹಲವು ವರ್ಷಗಳಿಂದ ಕುಕ್ಕೆಸುಬ್ರಮಣ್ಯದಲ್ಲಿ ಆಚರಣೆಗಳು ನಡೆಯುತ್ತಿದ್ದವು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ದ ನಾಗರೀಕ ಹಿತರಕ್ಷಣಾ ಸಮತಿಯವರು ಈ ಬಾರಿಯ ಶಿವರಾತ್ರಿಯ ಅಚರಣೆಯಲ್ಲಿ ಬದಲಾವಣೆ ಮಾಡಬೇಕು ಶೈವ ಪದ್ದತಿಯಂತೆ ವೈಭವದ ಶಿವರಾತ್ರಿ ಆಚರಣೆ ,ಜಾಗರಣೆಯು ಇರಬೇಕು ಅನ್ನುವ ಮನವಿಯನ್ನು ಅಯುಕ್ತರಿಗೆ ಕೊಟ್ಟಿದ್ದರು. ಈ ಮದ್ಯೆ ಒಂದಷ್ಟು ಗೊಂದಲಗಳು ಏರ್ಪಟ್ಟಿತು. ಇದಾದ ಬಳಿಕ ಮುಜರಾಯಿ ಇಲಾಖೆಯ ಅಯುಕ್ತರ ನೇತೃತ್ವದಲ್ಲಿ ಅಗಮಪಂಡಿತರು ಮತ್ತು ಆ ಕ್ಷೇತ್ರದ ಅರ್ಚಕರು ಎಲ್ಲ ಸೇರಿ ಸಭೆಯನ್ನು ನಡೆಸಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಗೆ ನಾಳೆಯ ಶಿವರಾತ್ರಿ ಅಚರಣೆಯನ್ನು ಮಾಡಬೇಕು ಜಾಗರಣೆಯನ್ನು ಮಾಡಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದರು.ಈ ಇದ್ದಕ್ಕೆ ಸಂಬಂಧಿಸಿದತೆ ಮುಜರಾಯಿ ಇಲಾಖೆಯ ಅಯುಕ್ತರು ಒಂದು ಅದೇಶವನ್ನು ಕೊಟ್ಟಿದ್ದರು ಈ ಅದೇಶದ ವಿರುದ್ದ ಮುರಳಿಧರ್ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೆರಿದ್ದರು ಈ ಅದೇಶ ಸರಿಯಲ್ಲ ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ವನ್ನು ಮುರಿದು ಈ ರೀತಿ ಅಚರಣೆಗಳನ್ನು ಮಾಡುವಂತದು ತಪ್ಪು ಅನ್ನುವಂತಹ ಅಭಿಪ್ರಾಯ ಕ್ಕೆ ಬಂದಿದ್ದರು. ಈ ಕಾರಣಕ್ಕೆ ನಿನ್ನೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು . ಇವತ್ತು ವಿಚಾರಣೆಗೆ ನಡೆದು ಮುಜರಾಯಿ ಅಯುಕ್ತರು ನೀಡಿರುವ ಅದೇಶಕ್ಕೆ ತಡೆಯಾಜ್ಞೆ ನೀಡಿ ಶಿವರಾತ್ರಿ ಆಚರಣೆ ಬದಲಿಸದಂತೆ ಹೈಕೊರ್ಟ್ ಅದೇಶ ನೀಡಿದೆ. ಈ ಹಿಂದೆ ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದರು ಅದೇ ರೀತಿಯಾಗಿ ಮುಂದುವರಿಸಬೇಕು ಅದರಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಸದ್ಯದ ಮಟ್ಟಿಗೆ ಮಾಡಬಾರದು ಅನ್ನುವುದನ್ನು ಹೈಕೊರ್ಟ್ ನಲ್ಲಿ ಅದೇಶದಲ್ಲಿ ಹೇಳಿದೆ.

ಜಾಹೀರಾತು
ಜಾಹೀರಾತು

ಶ್ರೀದೇವಳದಲ್ಲಿ ಉಮಾಮಹೇಶ್ಬರಗುಡಿಯಲ್ಲಿ ಈ ಹಿಂದಿನಂತೆ ಅನೂಚಾನವಾಗಿ ಬಂದಿರುವ ಪದ್ಧತಿಯಂತೆ ಡಿಟ್ಟಂ ಪ್ರಕಾರ ಪೂಜೆ ಅಭಿಷೇಕ ಉತ್ಸವಾದಿಗಳನ್ನು ನೆರವೇರಿಸುವುದು .
ಇದನ್ನು ಹೊರತು ಪಡಿಸಿ ಇತರ ಎಲ್ಲಾ ಅಂಶಗಳಿಗೂ ಅನ್ವಯವಾಗುವಂತೆ ಯಥಾಸ್ಥಿತಿ ಆದೇಶ ಹೇಳಿದೆ .
ಈ ವರ್ಷ ಶಿವರಾತ್ರಿಗೆ ಯಾವುದೇ ಬದಲಾವಣೆ ಮಾಡುವಂತಿಲ್ಲ.ಎರಡು ವಾರಗಳಿಂದ ನಡೆಯುತ್ತಿದ ಶೈವ ಮಾಧ್ವ ಸಿದ್ಧಾಂತ ಸಂಘರ್ಷಶಕ್ಕೆ ಹೈಕೋರ್ಟ್ ತೆರೆ ಎಳೆದಿದೆ.