ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಹಾವು ಕಡಿತ ಮತ್ತು ಅದರ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ-ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಹಾವು ಕಡಿತ ಮತ್ತು ಅದರ ಚಿಕಿತ್ಸಾ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಾವು ಮತ್ತು ನಾವು ಎಂಬ ಎನ್.ಜಿ.ಒ ಸಂಸ್ಥೆಯ ಪ್ರತಿನಿಧಿ ವಿಪಿನ್ ರಾಯ್ ಮಾತನಾಡಿ ಹಾವಿನ ಕಡಿತದ ಪರಿಣಾಮವು ವಿಷವು ಒಳಸೇರಲ್ಪಟ್ಟ ಪ್ರಮಾಣ ಮತ್ತು ಹಾನಿಗೊಳಪಟ್ಟ ವ್ಯಕ್ತಿಯ ಆರೋಗ್ಯ ಸ್ಥಿತಿಗಳು ಮುಂತಾದವುಗಳನ್ನು ಒಳಗೊಂಡಂತೆ ಇತರ ಹಲವಾರು ಸಂಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಭಯದ ಮತ್ತು ಭೀತಿಯ ಭಾವನೆಗಳು ಹಾವಿನ ಕಡಿತದ ನಂತರ ಸಾಮಾನ್ಯವಾಗಿರುತ್ತವೆ ಮತ್ತು ಸ್ವನಿಯಂತ್ರಿತ ನರಗಳ ವ್ಯವಸ್ಥೆಯ ಮೂಲಕ ರೋಗಲಕ್ಷಣಗಳ ಮೂಲಕ ಸಂವಹಿಸಲ್ಪಡುತ್ತದೆ. ವಿಷಯುಕ್ತ ಅಲ್ಲದ ಹಾವುಗಳ ಕಡಿತಗಳೂ ಕೂಡ ಹಾನಿಯನ್ನು ಉಂಟುಮಾಡುತ್ತವೆ, ಅನೇಕ ವೇಳೆ ಹಾವಿನ ಹಲ್ಲು, ಅಥವಾ ಅದರ ಪರಿಣಾಮವಾಗಿ ಉಂಟಾಗುವ ಸೋಂಕಿನ ಮೂಲಕದ ಸೀಳುವಿಕೆಯ ಕಾರಣದಿಂದ ಉಂಟಾಗುತ್ತವೆ ಎಂದರು. ಹಾವಿನ ಕಡಿತವು ಅತಿ ಸಂವೇದನ ಶೀಲತೆಯ ಪ್ರತಿಕ್ರಿಯೆಯಿಂದಲೂ ಕೂಡ ಉಲ್ಭಣಗೊಳ್ಳುತ್ತದೆ, ಅದು ಸಂಭಾವ್ಯವಾಗಿ ಮಾರಣಾಂತಿಕವಾಗಿರುತ್ತದೆ. ಹಾವಿನ ಕಡಿತಕ್ಕೆ ಪ್ರಥಮ ಚಿಕಿತ್ಸೆಯ ಶಿಫಾರಸುಗಳು ಹಾವುಗಳು ವಾಸವಾಗಿರುವ ಪ್ರದೇಶದ ಮೇಲೆ ಅವಲಂಬಿತವಾಗಿರುತ್ತವೆ. ಹಾವು ಕಡಿತ ವಾದ ಕೂಡಲೇ ಆಸ್ಪತ್ರೆಗೆ ಹೋಗಿ ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಅತೀ ಅವಶ್ಯಕ ಎಂದರು. ಕಾರ್ಯಕ್ರಮದಲ್ಲಿ ಎನ್.ಜಿ.ಒ ಸಂಸ್ಥೆಯ ಪ್ರತಿನಿಧಿ ಸ್ಪೂರ್ತಿ ಶೆಟ್ಟಿ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾ, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಾಪ್ತಿ ಗಂಭೀರ್ ಸ್ವಾಗತಿಸಿ ಸ್ನೇಹ ವಂದಿಸಿದರು. ವಿದ್ಯಾರ್ಥಿನಿ ರಿಯಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.














