Thursday, March 12, 2026
ಸುದ್ದಿ

ಮಂಗಳೂರಿನಲ್ಲಿ ಕಾರು ಮತ್ತು ಬೈಕ್ ಅಪಘಾತ ; ಬೈಕ್ ಸವಾರ ಮೃತ್ಯು- ಕಹಳೆ ನ್ಯೂಸ್

ಮಂಗಳೂರು: ಕಾರು ಮತ್ತು ಮೋಟಾರು ಬೈಕು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು,ಸಹ ಸವಾರ ಗಾಯಗೊಂಡ ಘಟನೆ ಡಿಸೆಂಬರ್ 8 ರಂದು ಮಂಗಳವಾರ ಮಧ್ಯಾಹ್ನ ಅಲಪೆ ಪಾಡಿಲ್ನ ಆರಣ್ಯ ಭವನ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವನು ಚಿಕ್ಕಮಗಳೂರು ಮೂಲದ ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 21ವಯಸ್ಸಿನ ಸುಮಂತ್ ಎಂದು ತಿಳಿದು ಬಂದಿದೆ. ಹಾಗೆಯೇ ಹಿಂಬದಿಯ ಸೀಟಿನಲ್ಲಿದ್ದ ಅರುಣ್ ಕುಮಾರ್ ಗಾಯಗೊಂಡು ಈ ಅಪಘಾತದಿಂದ ಪಾರಾರಿಯಾಗಿದ್ದಾರೆ.
ಸುಮಂತ್ ಮತ್ತು ಅವರ ಸ್ನೇಹಿತರು ಮೂರು ಮೋಟಾರು ಬೈಕ್‌ಗಳಲ್ಲಿ ವಿವಿಧ ಸ್ಥಳಗಳ ಪ್ರವಾಸದಲ್ಲಿದ್ದರು.ಮತ್ತು ಅವರು ಚಿಕ್ಕಮಗಳೂರಿನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ, ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಅವರು ಕಡಲತೀರಗಳಿಗೆ ತೆರಳುತ್ತಿದ್ದಾಗ ಕಾರಿನ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು