
ಬೆಳ್ತಂಗಡಿ: 2019-20 ನೇ ಸಾಲಿನ ಆತ್ಮ ಯೋಜನೆ ಯಡಿ ಸಾವಯವ ಕೃಷಿ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ರಾಧಾ ಕೃಷ್ಣ ಗೌಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.


ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆಯಲ್ಲಿ ಬಂದಾರು ಗ್ರಾಮದ ಕಬಿಲಾಲಿ ಎಂಬಲ್ಲಿನ ಪ್ರಗತಿಪರ ಸಾವಯವ ಕೃಷಿಕ ಸಾಮಾಜಿಕ ಮುಂದಾಳು ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿರುವ ರಾಧಾ ಕೃಷ್ಣ ಗೌಡ ಇವರಿಗೆ 2019-20 ನೇ ಸಾಲಿನ ಆತ್ಮ ಯೋಜನೆ ಯಡಿ ಸಾವಯವ ಕೃಷಿ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದರು. ಇನ್ನೂ ಇವರು ಇತರ ಕೃಷಿಕರಿಗೆ ಸ್ಪೂರ್ತಿಯಾಗಿ ಬಂದಾರು ಗ್ರಾಮದ ಕೀರ್ತಿ ಪತಾಕೆಯನ್ನು ಮುಗಿಲೇತ್ತರಕ್ಕೆ ಹಾರಿಸಿದ್ದಾರೆ.














