Thursday, March 12, 2026
ಹೆಚ್ಚಿನ ಸುದ್ದಿ

ಜನರಿಂದ ಐಡಿಯಾ ಕೇಳಿದ ಪ್ರಧಾನಿ ನರೇಂದ್ರ ಮೋದಿ- ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ಮೋದಿಯವರು ಈ ರೀತಿ ಕೆಲ್ಸ ಮಾಡ್ಬೋದು, ಆ ರೀತಿಯಲ್ಲಿಯೂ ಶ್ರಮಿಸ್ಬೋದು ಅಂತಾ ಅದೆಷ್ಟೊ ಮಂದಿ ಹೇಳ್ತಾ ಇರ್ತಾರೆ. ಅಂತಹವರಿಗೆ ಪ್ರಧಾನಿ ಮೋದಿಯವರೇ ಒಂದು ವೇದಿಕೆ ಕಲ್ಪಿಸಿದ್ದು, ನಿಮ್ಮ ಐಡಿಯಾಗಳನ್ನ ನೇರವಾಗಿ ನನಗೆ ತಿಳಿಸಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು,ಪ್ರಧಾನಿ ನರೇಂದ್ರ ಮೋದಿ ಇದೀಗ ಜನರಿಂದ ಐಡಿಯಾ ಕೇಳಿದ್ದಾರೆ. ‘ಮನ್​ ಕಿ ಬಾತ್​’ ಮೂಲಕ ಆಗಾಗ ತಮ್ಮ ಮನದ ಅನಿಸಿಕೆಗಳನ್ನ ಹಂಚಿಕೊಳ್ಳುವ ಮೋದಿ, ಆ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರ ಕುರಿತು ಕೂಡ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ.
ಈಗ ಅಂಥ ಸಾಧಕರ ಬಗ್ಗೆ ಹಾಗೂ ಸಾಮಾಜಿಕ ಪರಿವರ್ತನೆಗಾಗಿ ತಮ್ಮಲ್ಲಿರುವ ಯೋಚನೆ-ಯೋಜನೆಗಳ ವಿಚಾರಗಳಿದ್ದರೇ ನನ್ನಲ್ಲಿ ಹಂಚಿಕೊಳ್ಳಿ ಎಂದಿದ್ದಾರೆ ಎಂದು ಜನರಿಗೆ ಟ್ವೀಟ್ ಮೂಲಕ ಕರೆ ನೀಡಿದ್ದಾರೆ ಮೋದಿ. ಅದ್ರಂತೆ, ಅ. 25ರಂದು ನಡೆಯುವ ‘ಮನ್​ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಅಂಥ ಆಯ್ದ ಐಡಿಯಾ/ಸಾಧಕರ ಕುರಿತು ತಮ್ಮ ಮಾತಿನಲ್ಲಿ ಉಲ್ಲೇಖಿಸಲಿದ್ದಾರೆ ಎನ್ನಲಾಗ್ತಿದ್ದು, ಆಸಕ್ತರು ಪ್ರಧಾನಿ ಮೋದಿಗೆ ಐಡಿಯಾಗಳನ್ನ ಕಳಿಸಬಹುದಾಗಿದೆ.

ಜಾಹೀರಾತು
ಜಾಹೀರಾತು