Sunday, March 8, 2026
ಸಿನಿಮಾಸುದ್ದಿ

ಸ್ಯಾಂಡಲ್​ವುಡ್​ ನಟ ನಟಿಯ ಡ್ರಗ್ಸ್ ದಂದೆ : ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ..? ಸ್ಯಾಂಡಲ್ವುಡ್​ ರಹಸ್ಯ ಬಿಚ್ಚಿಟ್ಟ ಇಂದ್ರಜಿತ್​! – ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ ; ಸ್ಯಾಂಡಲ್​ವುಡ್​ ಕುರಿತು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ! – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಇರುವ ಮಾದಕ ಜಾಲದ ನಂಟಿನ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ನಟ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್ ಅವರು​ ಬಿಚ್ಚಿಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಕನ್ನಡ ಸಿನಿಮಾರಂಗ ಮಾದಕ ಜಾಲದಲ್ಲಿ ಒಳಗೊಂಡಿದೆ. ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ. ಸಮಾಜಕ್ಕೆ ಒಳಿತಾಗಲಿ ಎಂಬ ಕಾರಣಕ್ಕೆ ಈ ವಿಚಾರವನ್ನು ನಾನು ಬಹಿರಂಗಪಡಿಸುತ್ತಿದ್ದೇನೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿದೆ ಎಂದು ನಾನು ಹೇಳಲ್ಲ. ಆದರೆ, ಕೆಲವರು ಭಾಗಿಯಾಗಿರೋದ್ರಿಂದ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಸೇರಿದಂತೆ ಇನ್ನು ಅನೇಕರು ಇದ್ದಾರೆಂದು ಗಂಭೀರ ಆರೋಪ ಮಾಡಿದರು.

ಜಾಹೀರಾತು
ಜಾಹೀರಾತು

ಒಬ್ಬ ಯುವನಟ ತೀರಿಹೋದರು. ಏಕೆ ಅವರ ಪೋಸ್ಟ್ ಮಾರ್ಟಮ್ ಮಾಡಲಿಲ್ಲ. ಇದರ ಹಿಂದೆ ರಾಜಕೀಯ ನಾಯಕರ ಕೈವಾಡ ಇದೆ ಎಂದು ಆರೋಪಿಸಿದರು. ಅಂದಹಾಗೆ ಇತ್ತೀಚೆಗೆ ಬಾಲಿವುಡ್​ ನಟ ಸುಶಾಂತ್​ ಮೃತಪಟ್ಟರು. ಆದರೆ, ಸುಶಾಂತ್​ ಶವಪರೀಕ್ಷೆ ನಡೆದಿದ್ದು, ತನಿಖೆ ಮುಂದುವರಿದಿದೆ. ಚಂದನವನದಲ್ಲಿ ನಟ ಚಿರು ಹೃದಯಾಘಾತದಿಂದ ಮೃತಪಟ್ಟರು. ಇವರ ಬೆನ್ನಲ್ಲೇ ಮತ್ತೊಬ್ಬ ಯುವನಟ ಸುಶೀಲ್​ ಗೌಡ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಇಂದ್ರಜಿತ್​ ಹೇಳಿದ್ದು, ಯಾರ ಕುರಿತು ಎಂಬುದು ಇದೀಗ ನಿಗೂಢವಾಗಿದೆ.

ನಿನ್ನೆ ಮೊನ್ನೆ ಬಂದವರು, ಮೂರ್ನಾಲ್ಕು ಸಿನಿಮಾ ಮಾಡಿದವರು ಇದರಲ್ಲಿ ಭಾಗಿಯಾಗಿದ್ದಾರೆ. ಜಾಲದಲ್ಲಿ ರಾಜಕಾರಣಿ ಮಕ್ಕಳು, ಪ್ರಭಾವಿ ನಾಯಕರ ಮಕ್ಕಳು ಇರೋದ್ರಿಂದ ಈ ತರ ಆಗ್ತಾ ಇದೆ. ಇಂತಹವರ ಬಗ್ಗೆ ತನಿಖೆ ಮಾಡಲು ಪೊಲೀಸ್ ಇಲಾಖೆಗೆ ಭಯನಾ? ಹನಿಟ್ರ್ಯಾಪ್ ವಿಚಾರವಾಗಿ ಸುದ್ದಿಯಾಯ್ತು. ಅದರ ಬಗ್ಗೆ ಯಾಕೆ ತನಿಖೆ ನಡೆಸಲಿಲ್ಲ? ಯಾಕೆ ಕೈಬಿಟ್ರಿ? ಪೊಲೀಸರಿಗೆ ಕ್ರಮ‌ ಕೈಗೊಳ್ಳೋಕೆ ಧೈರ್ಯ ಇಲ್ವಾ? ಎಂದು ಪ್ರಶ್ನಿಸಿದರು.

ಸರಿಯಾಗಿ ಕನ್ನಡ ಮಾತಾಡೋಕೆ ಬರದವರು ಡ್ರಗ್ಸ್ ತಗೊಂಡು ಕನ್ನಡ ಸಿನಿಮಾ ಹಾಳು ಮಾಡ್ತಾ ಇದ್ದಾರೆ. ಈ ರೀತಿ ನಮ್ಮ ಸಿನಿಮಾರಂಗ ಹಾಳಾಗಬಾರದೆಂದು ಹೇಳ್ತಾ ಇದ್ದೀನಿ. ತನಿಖೆಗೆ ಬೇಕಾದ ವಿಚಾರ ಹೇಳಲು ನಾನು ತಯಾರಿದ್ದೇನೆ. ಇದರಿಂದ ಪೊಲೀಸರಿಗೆ ಸಹಾಯ ಆಗಲಿ. ಕನ್ನಡ ಚಿತ್ರರಂಗ ಇಂತಹ ಕಳಂಕದಿಂದ ಹೊರಬರಲು ಸಹಾಯ ಆಗುತ್ತದೆ. ನನಗೆ ರಕ್ಷಣೆ ಕೊಟ್ರೆ, ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದರು.

ರಕ್ತ ಪರೀಕ್ಷೆ ಮಾಡಿಸಿ, ಆಗ ಎಲ್ಲವೂ ಬಹಿರಂಗವಾಗಲಿದೆ. ಈ ಹಿಂದೆ ಹಲವು ನಟ-ನಟಿಯರು ಕಾರಲ್ಲಿ ಸಿಕ್ಕಿಬದ್ದಿದ್ದರು. ಪಾರ್ಟಿ, ಪಬ್ಬು ಅಂತಾ ಯಾರ್ಯಾರು ಎಲ್ಲಿ ಎಲ್ಲಿ ಇದ್ರು ಅಂತಾ ಪೊಲೀಸರಿಗೆ ಗೊತ್ತಿದೆ. ಪೊಲೀಸರಿಗೆ ಸಪೋರ್ಟಿವ್ ಆಗಿ ನಾನು ಹೇಳಬಲ್ಲೆ‌ ಎಂದರು.

ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ ; ಸ್ಯಾಂಡಲ್​ವುಡ್​ ಕುರಿತು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ!

ಗುರುವಾರವಷ್ಟೇ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಾಜ್ಯ ರಾಜಧಾನಿಯಲ್ಲಿ ಬೃಹತ್​​ ಡ್ರಗ್ಸ್​ ಜಾಲವನ್ನು ಭೇದಿಸಿದ್ದು, ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್ ಹೆಸರು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ನಟ, ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ​

ಮಾದ್ಯಮದೊಂದಿಗೆ ಮಾತನಾಡಿರುವ ಅವರು ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ನನಗೆ ಸರ್ಕಾರದಿಂದ ಸೂಕ್ತವಾದ ರಕ್ಷಣೆ ಕೊಟ್ರೆ ಇನ್ನಷ್ಟು ಸತ್ಯಗಳನ್ನು ಹೇಳುತ್ತೇನೆ. ನಮ್ಮಲ್ಲಿ ರೇವ್ ಪಾರ್ಟಿಗಳು ನಡೆಯುತ್ತವೆ. ಅದರಲ್ಲಿ ಯುವ ನಟ-ನಟಿಯರು ಮಾದಕ ವಸ್ತುಗಳನ್ನ ಬಳಸ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಈ ಕುರಿತು ಸೂಕ್ತವಾದ ತನಿಖೆ ನಡೆಯಬೇಕು ಡ್ರಗ್ಸ್ ಮಾಫಿಯಾದಿಂದ ಆಡಿ, ಜಾಗ್ವಾರ್ ಕಾರು ಪಡೆದ ಕಲಾವಿದರ ಹೆಸರು ಬಹಿರಂಗ ಆಗಬೇಕು. ಸರಿಯಾದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ತನಿಖೆಗೆ ನನ್ನ ಸಂಪೂರ್ಣ ಸಹಕಾರ ಕೊಡುತ್ತೇನೆ. ಅಧಿಕಾರಿಗಳು ಕರೆದರೆ ತನಿಖೆಗೆ ಇನ್ನಷ್ಟು ಮಾಹಿತಿ ಕೊಡುತ್ತೇನೆಂದು ಹೇಳಿದರು.

ಇದ್ದಕ್ಕಿದ್ದಂತೆ ಹಣ-ಹೆಸರು ಮಾಡುವ ಉದ್ದೇಶದಿಂದ ಹೀಗಾಗಿದೆ. ಹಲವು ಯುವ ನಟ-ನಟಿಯರು ಅದರ ಜಾಲದಲ್ಲಿದ್ದಾರೆ. ಹಲವು ಪಾರ್ಟಿಗಳಲ್ಲಿ ನಡೆಯೋ ಈ ರೀತಿ ವಿಚಾರ ನಮ್ಮ ಗಮನಕ್ಕಿದೆ. ಈ ಹಿಂದೆ ಆಗಿರೋ ಕೆಲವು ಘಟನೆಯಲ್ಲಿ ಅದರ ಘಾಟು ಬಡಿದಿದೆ. ಆದರೆ ತನಿಖಾಧಿಕಾರಿಗಳು ಅವರ ಹೆಸರನ್ನು ಬಹಿರಂಗಪಡಿಸಬೇಕು. ಅದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಈ ಹಿಂದೆ ಕೂಡ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಕೆಲವು ನಟಿಯರು ಅನ್ನೋ ಮಾತು ಕೇಳಿ ಬಂತು. ಆದ್ರೆ, ಅದು ಬಹಿರಂಗ ಆಗಲಿಲ್ಲ. ಹೀಗಾಗಿ ಬಹಿರಂಗ ಆಗಬೇಕೆಂದು ಒತ್ತಾಯಿಸಿದರು.