
ಹಣ ಕೊಡದ ಅಪ್ಪನನ್ನೇ ಬಲಿ ಪಡೆದ ಪುತ್ರ.!

ತನಗೆ ಹಣ ಕೊಡಲಿಲ್ಲ ಎಂಬ ಒಂದೇ ಕಾರಣಕ್ಕೆ ಹುಟ್ಟಿಸಿದ ಅಪ್ಪನನ್ನೇ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಪಾಪಿ ಪುತ್ರ. ಈ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
19 ವರ್ಷ ಇಮ್ರಾನ್ ಎಂಬಾತ ಅಪ್ಪ ರಹ್ಮತ್ ಎಂಬುವರನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಘಟನೆಗೆ ಕಾರು ಚಾಲಕನೊಬ್ಬ ಪ್ರತ್ಯಕ್ಷದರ್ಶಿಯಾಗಿದ್ದಾರೆ.
ದುರ್ಘಟನೆ ಬಳಿಕ ನೆರೆಹೊರೆಯ ಜನರು ತಕ್ಷಣವೇ ಗಾಯಾಳು ರೆಹ್ಮತ್ ಆಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ತೀವ್ರವಾದ ಗಾಯ ಮತ್ತು ರಕ್ತಸ್ರಾವದ ಪರಿಣಾಮ ಸಾವನ್ನಪ್ಪಿದ್ದಾರೆ.
ಪೊಲೀಸರು ಪಾಪಿ ಪುತ್ರ ಇಮ್ರಾನ್ ನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.














