
ಸರ್ಕಾರದ ಆದೇಶದಂತೆ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಸದ್ಬಾವನ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ| ಮುರಲೀ ಮೋಹನ್ ಚೂಂತಾರು, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಕಚೇರಿ ಅಧೀಕ್ಷಕ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿಎಸ್, ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿ ಐತ್ತಪ್ಪ, ಮತ್ತು ಗೃಹರಕ್ಷಕ ಸನತ್ ಆಳ್ವ, ದಿವಾಕರ, ಚೇತನ್, ಬಶೀರ್, ಸತೀಶ್ ಆಚಾರ್ಯ, ಹರಿಪ್ರಸಾದ್, ಸುನೀಲ್, ತಮೀಮ್, ಪದ್ಮಾವತಿ, ಸುಲೋಚನಾ, ಸುಖಿತಾ. ಎ. ಶೆಟ್ಟಿ ಇವರುಗಳು ಪ್ರತಿಜ್ಞೆಯನ್ನು ಸ್ವಿಕರಿಸಿದರು.

















