
ಶ್ರೀ ರಾಮ ವಿದ್ಯಾಕೇಂದ್ರ ಇದರ ವತಿಯಿಂದ ‘ಪತ್ರಕರ್ತರೊಂದಿಗೆ ರಕ್ಷಾಬಂಧನ’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಹಿಂದೂಗಳ ವಿಶೇಷ ಹಬ್ಬವಾದ ರಕ್ಷಾಬಂದನವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ರಾಕಿ ಕಟ್ಟಿ ಸಂಭ್ರಮಿಸಿದರು. ಇಂದು ಮಧ್ಯಾನ 1ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪ್ರಭಾಕರ್ ಕಲ್ಲಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ಉದಯವಾಣಿ ಪತ್ರಕರ್ತರಾದ ಕಿರಣ್ ಸರಪಾಡಿ, ರಾಜ ಬಂಟ್ವಾಳ ಮತ್ತು ಕಹಳೆ ನ್ಯೂಸ್ ನ ಸಂಪಾದಕರಾದ ಶ್ಯಾಮ್ ಸುದರ್ಶನ್ ಹೊಸಮೂಲೆ, ಬಂಟ್ವಾಳ ಪತ್ರಕರ್ತರ ಸಂಘದಿಂದ ಹರೀಶ್ ಮಾಂಬಾಡಿ, ಕನ್ನಡಪ್ರಭ ಡಾ ಆತ್ಮಭೂಷಣ್, ವಿಶ್ವವಾಣಿ ಯ ಜಿತೆಂದ್ರ ಕುಂದಾಪುರ, ಪ್ರಜಾವಾಣಿಯ ಮೋಹನ್ ಶ್ರೇಯಾನ್, ವಿಜಯವಾಣಿಯ ಸಂದೀಪ್ ಸಾಲ್ಯಾನ್, ಹೊಸದಿಗಂತದ ಪ್ರಕಾಶ್ ಇಳಂತಿಲ, ಸಂಜೆವಾಣಿಯ ಕಿಶೋರ್ ಪೆರಾಜೆ ಮತ್ತಿತ್ತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.















