Saturday, March 14, 2026
ಸುದ್ದಿ

ಮುಂಗಡ ಪತ್ರ ಹಾಗೂ ಜಿಎಸ್‍ಟಿ ವಿಚಾರ ಸಂಕಿರಣ : ಮಲ್ಲೇಶ್ವರಂನಲ್ಲಿ ನಾಳೆ ಸಂಜೆ ದೇಶದ ಖ್ಯಾತ ಹಣಕಾಸು ತಜ್ಞರಿಂದ ಮಾಹಿತಿ – ಕಹಳೆ ನ್ಯೂಸ್

ಮಲ್ಲೇಶ್ವರಂ : ಕೇಂದ್ರ ಮುಂಗಡ ಪತ್ರ ಹಾಗೂ ಜಿಎಸ್‍ಟಿ ಕುರಿತಾದ ವಿಚಾರ ಸಂಕಿರಣ, ನಾಳೆ ಸಂಜೆ 4 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭಾದ ಸಭಾಂಗಣದಲ್ಲಿ ನಡೆಯಲಿದೆ. ದೇಶದ ಖ್ಯಾತ ಹಣಕಾಸು ತಜ್ಞರಾದ CA ಮಧುಕರ ಹಿರೆಗಂಗೆ, CA ಪ್ರಕಾಶ್ ಹೆಗಡೆ, CMA ಕಮಲಾಕರ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಪ್ರಸಕ್ತ ಸಾಲಿನ ಮುಂಗಡ ಪತ್ರ ಹಾಗೂ ಜಿಎಸ್‍ಟಿ ಕುರಿತಾದ ವಿದ್ಯಮಾನಗಳ ಕುರಿತಾಗಿ ಮಾಹಿತಿ ಹಾಗೂ ಚರ್ಚೆಗಳು ನಡೆಯಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹವ್ಯಕ ವಾಣಿಜ್ಯ ಬಳಗದ ಸಂಯೋಜನೆಯಲ್ಲಿ ಕಳೆದ 7 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ವಾಣಿಜ್ಯ ಹಾಗೂ ಹಣಕಾಸಿನ ಕುರಿತಾದ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು