
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊನ್ನಾವರ ತಾಲ್ಲೂಕಿನ ಮೇಲಿನ ಇಡಗುಂಜಿ ಗುಣವಂತೆ ಏತ ನೀರಾವರಿ ಯೋಜನೆಗೆ ಇಂದು ಭಟ್ಕಳ ಶಾಸಕರಾದ ಸುನಿಲ್ ನಾಯ್ಕ್ ಚಾಲನೆ ನೀಡಿದರು. ಈ ಯೋಜನೆಯು ಸರಿ ಸುಮಾರು 8000 ಜನರಿಗೆ, 700 ಎಕರೆ ಕೃಷಿ ಭೂಮಿಗೆ ನೀರುಣಿಸುವ ಮೂಲಕ, ಅಂತರ್ಜಲವನ್ನು ಕೂಡ ಹೆಚ್ಚಿಸಲು ಸಹಕಾರಿಯಾಗಲಿದೆ. ಇದು ಬರೋಬ್ಬರಿ 6 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಾಗಿದೆ.

















