
ಜಾತಿ ಮತ ಬಡವ ಬಲ್ಲಿದರೆಂಬ ಭೇದವಿರಿಸದೆ ಎಲ್ಲರಿಗೂ ಸಾಂತ್ವನದ ಬದುಕನ್ನು ಕಟ್ಟಿ ಕೊಡುವ ಪರಮ ಪವಿತ್ರ ಜೀವನ ವೈದ್ಯಕೀಯ ಜೀವನ. ವೈದ್ಯರ ದಿನಾಚರಣೆ, ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ದಿನ. ವೈದ್ಯರ ದಿನಾಚರಣೆ ಅಂಗವಾಗಿ ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನ ಆಚರಿಸಲಾಯಿತು. ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರವನ್ನು ಭಟ್ಕಳ ಶಾಸಕರಾ ಸುನಿಲ್ ನಾಯ್ಕ್ ಉದ್ಘಾಟಿಸಿ ವೈದ್ಯರನ್ನು ಸನ್ಮಾನಿಸಿದರು. ಇನ್ನು ಈ ಸಂದರ್ಭದಲ್ಲಿ ಅನೇಕರು ಉಪಸ್ದಿತರಿದ್ದರು.




















