
ಪುತ್ತೂರು : ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಪುತ್ತೂರು ನಗರ ಠಾಣೆಗೆ ಕೊಟ್ಟು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮಾನವಿಯತೆ ಮೆರೆದಿದ್ದಾರೆ, ಸಚಿನ್ ಟ್ರೇಡರ್ಸ್ನ ಹಿಂಬದಿಯಲ್ಲಿ ಸಚಿನ್ ಕುಮಾರ್ ಎಂಬವರಿಗೆ ಚಿನ್ನದ ಸರ ಸಿಕ್ಕಿದ್ದು ತಕ್ಷಣ ಅವರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ರಾಜೇಶ್ ಪುಂಚಾಡಿಯವರೊಂದಿಗೆ ಪುತ್ತೂರು ನಗರ ಠಾಣೆಗೆ ತೆರಳಿ ಚಿನ್ನದ ಸರವನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ, ಇದೀಗ ಮಾನವೀಯತೆ ಮೆರೆದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.















