
ಪುತ್ತೂರು : ಕಲ್ಲಾರೆಯಲ್ಲಿ ವಾಸವಾಗಿರುವ ಸತೀಶ್ ಆಚಾರ್ಯ ಎಂಬವರು ಪುತ್ತೂರು ಜುವೆಲ್ಲರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ತನ್ನ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ಕಲ್ಲಾರೆಯಲ್ಲಿ ವಾಸವಾಗಿದ್ದು. ಇವರ ಒಬ್ಬ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ ಈಗ ಕಿರಿಯ ಮಗಳು ಹಾಗೂ ಹೆಂಡತಿ ಜೊತೆ ಕಲ್ಲಾರೆಯಲ್ಲಿ ಬಾಡಿಗೆ ರೂಮಲ್ಲಿ ವಾಸವಾಗಿರುತ್ತಾರೆ ಇತ್ತೀಚೆಗೆ ಸತೀಶ್ ರವರು ತೀರ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇವರ ಔಷದಿಗೆ ಹಾಗೂ ಮನೆಯವರ ಜೀವನ ಸಾಗಿಸುವುದೇ ತುಂಬಾ ಕಷ್ಟಕರವಾಗಿದ್ದು ಇವರೀಗೆ ವಜ್ರತೇಜಸ್ಸ್ ಗ್ರೂಪಿನ ವತಿಯಿಂದ 12ನೇ ಹಂತದ ಸಹಾಯಧನವಾಗಿ 15000 ರೂ ನೀಡಲಾಯಿತು.
ಈ ಸಂದರ್ಭ ವಜ್ರತೇಜಸ್ಸ್ ಪುತ್ತೂರು ವಾಟ್ಸಪ್ ಗ್ರೂಪಿನ ಕಾರ್ಯದರ್ಶಿಯಾದ ಧನ್ಯಕುಮಾರ್ ಬೆಳಂದೂರು. ಸದಸ್ಯರುಗಳಾದ ನವೀನ್ ಕುಲಾಲ್, ನವನೀತ್ ಬಜಾಜ್ ಪುತ್ತೂರು, ರೂಪೇಶ್ ಪೂಜಾರಿ ಏಲ್ಮುಡಿ, ಹರಿಣಿ ಪುತ್ತುರಾಯ, ದಿವಾಕರ್ ಆಚಾರ್ಯ ಪುತ್ತೂರು, ಉಪಸ್ಥಿತರಿದ್ದರು














