
ಕಹಳೆ ನ್ಯೂಸ್ ವರದಿಗಾರನ ಮೇಲೆ ಅಕ್ರಮ ಮರಳುಗಾರಿಕೆ ಮಾಡಿಕೊಂಡಿದ್ದ ಐತ್ತೂರು ಗ್ರಾಮದ ಕೇನ್ಯ ನಿವಾಸಿ ಗಣೇಸ್ ಮತ್ತು 102ನೇ ನೆಕ್ಕಿಲಾಡಿ ಗ್ರಾಮದ ಮಾಯಿಪಾಜೆ ನಿವಾಸಿ ಅಜಯ್ ಹಾಗೂ ಎಂಟು ಜನರು ಜೂನ್ 3 ರಂದು ಹಲ್ಲೆ ನಡೆಸಿದ್ದರು. ಈ ಘಟನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಕಡಬ ತಾಲೂಕು ಪತ್ರಕರ್ತರ ಸಂಘ ಇದನ್ನು ಖಂಡಿಸಿದೆ.

ವರದಿಗಾರ ಗಣೇಶ್ ಇಡಾಲರ ಕೈಯಲ್ಲಿದ್ದ ಕ್ಯಾಮಾರ, ಮೊಬೈಲ್ ಫೋನ್ ಪುಡಿಗೈದು, ಅವರಲ್ಲಿದ್ದ ಬೆಳೆಬಾಳುವ ಚಿನ್ನದ ಚೈನ್ನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದ್ರೆ ಆರೋಪಿಗಳು ಹಲ್ಲೆಗೊಳಗಾಗಿರುವ ಪತ್ರಕರ್ತನ ಮೇಲೆಯೇ ಸುಳ್ಳು ದೂರು ನೀಡಿ ಪ್ರಕರಣ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆ. ಇದನ್ನು ಕಡಬ ತಾಲೂಕು ಪತ್ರಕರ್ತರ ಸಂಘ ಖಂಡಿಸಿದೆ.
















