
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಬಂದಾರು ಗ್ರಾಮದ ಕುಸುಮಾವತಿ ಮತ್ತು ರಾಘವ ಗೌಡ ದಂಪತಿಗಳ ನವಜಾತ ಶಿಶು ಮೃತ ಪಟ್ಟಿರುವ ಬಗ್ಗೆ ಶಾಸಕರಿಗೆ ತಿಳಿಸಿದ ತಕ್ಷಣವೇ ಶಾಸಕರಾದ ಶ್ರೀ ಹರೀಶ್ ಪೂಂಜರವರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಸಂಬಂಧ ಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ಕರೆಮಾಡಿ ತಕ್ಷಣವೇ ವೆನ್ಲಾಕ್ ಮತ್ತು ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಜ್ಞಾಪಕ ಪತ್ರ ನೀಡುವಂತೆ ಸೂಚಿಸಿದರು.















