
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ ಅಮೂಲ್ಯ ಸಾಮಗ್ರಿ ನಾಪತ್ತೆಯಾಗಿವೆ. ಕೇರಳ ಹೈಕೋರ್ಟ್ ನಿಯೋಜಿಸಿದ ವಿಶೇಷ ಲೆಕ್ಕಪತ್ರ ತಪಾಸಣಾ ತಂಡ ಇದನ್ನು ಪತ್ತೆ ಮಾಡಿದೆ. ಚಿನ್ನದೊಂದಿಗೆ ಬೆಳ್ಳಿ ಹಾಗೂ ಇತರ ಅಮೂಲ್ಯ ಸಾಮಗ್ರಿ ನಾಪತ್ತೆಯಾಗಿವೆ. ಹಿನ್ನೆಲೆಯಲ್ಲಿ ದೇವಸ್ಥಾನದ ಚಿನ್ನಾಭರಣ ಇರಿಸುವ ಭದ್ರತಾ ಕೊಠಡಿಯಲ್ಲಿರುವ ಅಮೂಲ್ಯ ವಸ್ತುಗಳನ್ನು ಪರಿಶೀಲಿಸಲು ಸಮಿತಿ ತೀರ್ಮಾನಿಸಿದೆ. ಶಬರಿಮಲೆ ದೇವಸ್ಥಾನಕ್ಕೆ ಲಭಿಸುವ ಚಿನ್ನವನ್ನು ತಿರುವಾಂಕೂರು ದೇವಸ್ಥಾನ ಭದ್ರತಾ ಕೋಶದಲ್ಲಿ ನೀಡಲಾಗಿದೆ. ಸಹಾಯಕ ಲೆಕ್ಕ ಅಧಿಕಾರಿ ನೇತೃತ್ವದ ಸಿಬ್ಬಂದಿಗೆ ಉಸ್ತುವಾರಿ ವಹಿಸಲಾಗಿದ್ದು, ದೇವಸ್ಥಾನ ಸಮಿತಿ ಸಹಿತ ಹಲವರು ದೂರು ನೀಡಿದ್ದರು ಎನ್ನಲಾಗಿದೆ.














