
ಉಪ್ಪಿನಂಗಡಿಯ ಕೊಕ್ಕಡದ ಕಾಪಿನಾಡು ಎಂಬಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಇದರಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲೆಂದು ಹೋದ ಅಂಬ್ಯುಲೆನ್ಸ್ ಡಿಕ್ಕಿಯಾದ ಘಟನೆ ನಡೆದಿದೆ. ರಕ್ಷಣೆಗೆ ತೆರಳಿದ ಆಶೀರ್ವಾದ ಹೊಸಮಜಲು ಆಂಬುಲೆನ್ಸ್ ಸ್ಥಳಕ್ಕೆ ತಲುಪು ವೇಳೆ ಗಾಯಾಳುಗಳನ್ನು ಬೇರೆ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿಂದ ಪುನಃ ಹಿಂದಿರುಗುತ್ತಿದ್ದ ಈ ಅಂಬ್ಯುಲೆನ್ಸ್ ಸೌತಡ್ಕದ ರಸ್ತೆಯ ಬದುವಿನ ಬರೆಗೆ ಡಿಕ್ಕಿಯಾಗಿದೆ. ಇದರಿಂದಾಗಿ ಚಾಲಕನಿಗೆ ಗಾಯವಾಗಿದ್ದು ಚಿಕಿತ್ಸೆಗೆಂದು ಮಂಗಳೂರಿಗೆ ರವಾನಿಸಲಾಗಿದೆ.

















