
ಉಡುಪಿ: ತುಳುನಾಡಿನಲ್ಲಿ ಹನುಮಂತನ ಆರಾಧನೆಗೆ ಸಂಬಂಧಪಟ್ಟಂತೆ ಹಳೆಯ ಕುರುಹುವೊಂದು ಪತ್ತೆಯಾಗಿದೆ. ಉಡುಪಿಯಲ್ಲಿ ಪತ್ತೆಯಾದ ಶಿಲಾಶಾಸನವು ಸರಿಸುಮಾರು 14 ನೇ ಶತಮಾನದ್ದು ಎಂದು ಇತಿಹಾಸಕಾರರು ಹೇಳಿದ್ದಾರೆ. ಇದು ವಿಜಯನಗರ ಕಾಲಘಟ್ಟಕ್ಕೆ ಸಂಬಂಧಿಸಿದ್ದು ಆಗಿನಿಂದಲೂ ಹನುಮನ ಆರಾಧನೆ ಕರಾವಳಿಯಲ್ಲಿ ಇತ್ತೆಂದು ತಿಳಿಬಂದಿದೆ. ಶಾಸನದಲ್ಲಿ ಹನುಮಂತ, ಶಿವಲಿಂಗ, ನಂದಿ, ಸೂರ್ಯ, ಚಂದ್ರ ಮತ್ತು ಧ್ವಜಸ್ತಂಭ ಹೋಲುವ ಉಬ್ಬು ಚಿತ್ರವಿರುವುದು ಇದರ ವಿಶೇಷತೆಯಾಗಿದೆ.














