
ಪ್ರಧಾನಿ ಮೋದಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಜೊತೆಗೆ ವಡೋದರಾದಿಂದಲೂ ಸ್ಪರ್ಧಿಸಿ ಗೆದ್ದಿದ್ದರು. ತದನಂತರ ವಡೋದರ ಕ್ಷೇತ್ರದ ಸ್ಥಾನ ತೆರೆವುಗೊಂಡ ಮೇಲೆ, ಬಿಜೆಪಿ ಅಭ್ಯರ್ಥಿಯಾಗಿ ಬೈ ಎಲೆಕ್ಷನ್ನಲ್ಲಿ ಗೆದ್ದು ಸಂಸದೆಯಾದವರು ರಂಜನ್ ಬೆನ್ ಭಟ್. ಇವರು ಯಾವಾಗಲೂ ಪಾದರಸದಂತೆ ಚುರುಕಾಗಿ ತಮ್ಮ ಕೆಲಸವನ್ನು ಮಾಡುತ್ತಿರುತ್ತಾರೆ. ಸದಾಕಾಲ ಜನಸಾಮಾನ್ಯರ ಜೊತೆ ಸಂಪರ್ಕವನ್ನಿಟ್ಟುಕೊಂಡು ಕೆಲಸ ಮಾಡುವ ಅಪರೂಪದ ನಾಯಕಿ ಇವರು. ಈ ಬಾರಿಯೂ ವಡೋದರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಂಜನ್ ಬೆನ್ ಭಟ್ ಒಳ್ಳೆಯ ಆಟಗಾರ್ತಿಯೂ ಹೌದು.















