Friday, March 13, 2026
ಸುದ್ದಿ

ಮಗುವಿಗೆ ಅಭಿನಂದನ್ ಹೆಸರು ನಾಮಕರಣ – ಕಹಳೆ ನ್ಯೂಸ್

ಪಾಪಿ ಪಾಕ್ ಕಪಿಮುಷ್ಠಿಯಿಂದ ಹೊರಬಂದ ಭಾರತಾಂಬೆಯ ಹೆಮ್ಮೆಯ ಪುತ್ರ ಅಭಿನಂದನ್ ವರ್ಧಮಾನ್ ಹೆಸರು ಈಗ ಎಲ್ಲೆಡೆ ಹರಿದಾಡ್ತಿದೆ. ಇದಕ್ಕೆ ಪೂರಕವಾಗಿ ವೀರಪುತ್ರನ ಹೆಸರನ್ನು ಹುಟ್ಟಿದ ಮಕ್ಕಳಿಗೆ ಇಡಲಾಗ್ತಿದೆ. ಅಂತೆಯೇ ಕೊಪ್ಪಳದಲ್ಲಿ ಹುಟ್ಟಿದ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಹಂತೇಶ್ಶೆಟ್ಟರ್, ಶಾಂತಾ ಶೆಟ್ಟರ್ ದಂಪತಿ ವಿಂಗ್ ಕಮಾಂಡರ್ ಅಭಿನಂದನ್ ಗೌರವಾರ್ಥ ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರು ಇಟ್ಟಿದ್ದಾರೆ.

ತಮ್ಮ ಮಗುವಿಗೆ ಈ ಮುಂಚೆ ಅಥರ್ವ ಅಥವಾ ಅಭಿನವ್ ಎಂದು ನಾಮಕರಣ ಮಾಡಲು ನಿರ್ಧರಿಸಿದ್ರಂತೆ. ಆದ್ರೆ ಅಭಿನಂದನ್ ಮಾಡಿದ ಸಾಹಸ ಮತ್ತು ಶೌರ್ಯಕ್ಕೆ ಮೆಚ್ಚಿ ದೇಶವೇ ಅವರನ್ನು ಕೊಂಡಾಡ್ತಿದೆ. ಹೀಗಿರುವಾಗ ತಮ್ಮ ಮಗುವಿಗೆ ಅವರ ಹೆಸರೇ ಇಟ್ಟಿರುವುದಾಗಿ ಪೋಷಕರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು