
ದೇಶದಲ್ಲಿ ಜನಸಂಖ್ಯೆ ತಾಂಡವಾಡುತ್ತಿದ್ದು, ಎಗ್ಗಿಲ್ಲದೆ ತನ್ನ ವಿಶಾಲ ಬಾಹುವನ್ನು ಚಾಚುತ್ತಲೆ ಇದೆ, ಈ ಜನಸಂಖ್ಯೆಯನ್ನ ಹಿಮ್ಮೆಟ್ಟಿಸಲು ಯೋಗ ಗುರು ಬಾಬಾ ರಾಮದೇವ್ ಹೊಸ ಯೋಜನೆಯನ್ನ ಹೊರಹಾಕಿದ್ದಾರೆ.
ಹೌದ ಇನ್ನು ಮುಂದೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು, ಎರಡಕ್ಕಿಂತ ಹೆಚ್ಚಿಗೆ ಮಕ್ಕಳು ಇರುವ ವ್ಯಕ್ತಿಗಳಿಗೆ ಮತದಾನದ ಹಕ್ಕು ನೀಡಬಾರದು.ಸರ್ಕಾರಿ ಉದ್ಯೋಗ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳಲ್ಲಿ ಅವಕಾಶ ನೀಡಬಾರದು ಎಂದು ರಾಮ್ ದೇವ್ ಹೇಳಿದರು.
ಹೀಗೆ ಮಾಡಿದರೆ ಆಗ ದೇಶದಲ್ಲಿ ಜನಸಂಖ್ಯೆಯು ನಿಯಂತ್ರಣಕ್ಕೆ ಬರುವುದು ಎಂದು ಅಲಿಘಡ್ ನಲ್ಲಿ ಪತಾಂಜಲಿ ಪರಿಧಾನ ಸಿದ್ಧ ಉಡುಪುಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ತಿಳಿಸಿದರು.
ಜನಸಂಖ್ಯೆ ನಿಯಂತ್ರಣ ಮಾಡಲು ಜಾತಿ, ಮತ, ಭೇದವಿಲ್ಲದೆ ಎಲ್ಲರಿಗೂ ಇದು ಅನ್ವಯವಾಗಬೇಕು. ಆಗ ಮಾತ್ರ ದೇಶದ ಜನಸಂಖ್ಯೆಗೆ ನಿಯಂತ್ರಣ ಬೀಳಬಹುದು ಎಂದು ರಾಮ್ ದೇವ್ ತಿಳಿಸಿದ್ದಾರೆ.














