
ಮಂಗಳೂರು : ಕಾವೂರು ಉಲ್ಲಾಸ ನಗರದ ಮನೆಯೊಂದರಿಂದ 39 ಗ್ರಾಂ ಚಿನ್ನಾಭರಣ ಹಾಗೂ 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಜೀಪನಡು ದೇರಾಜೆ ಮನೆ ನಿವಾಸಿ ಅಶೋಕ್ (41) ಬಂಧಿತ ಆರೋಪಿ. ಕಳವು ಮಾಡಲಾದ ಎಲ್ಲ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.














