
ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆ ಇಂದು ಬೆಂಗಳೂರಿನಿಂದ ಹೊರಡಬೇಕಿದ್ದ 10 ವಿಮಾನಗಳು ರದ್ದುಗೊಂಡಿದೆ.
ಯುದ್ಧದ ಪರಿಣಾಮ ವಾಯುನೆಲೆ ಮುಚ್ಚಿರುವ ಕಾರಣ ಇಂದು ಸಹ ವಿಮಾನಗಳ ಹಾರಾಟ ರದ್ದುಗೊಂಡಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುವ ಹಾಗೂ ವಿದೇಶದಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು ಕ್ಯಾನ್ಸಲ್ ಆಗಿದೆ.
ಯುದ್ಧ ಹಿನ್ನೆಲೆ ಇಂದು ಒಟ್ಟು 22 ವಿಮಾನಗಳ ಹಾರಾಟ ರದ್ದುಗೊಂಡಿದೆ. ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 10 ವಿಮಾನಗಳು ಹಾಗೂ ಆಗಮಿಸಬೇಕಿದ್ದ 12 ವಿಮಾನಗಳು ಕ್ಯಾನ್ಸಲ್ ಆಗಿದೆ. ಅಬುಧಾಬಿ, ಜಿದ್ದಾ, ದೋಹಾ, ದುಬೈ, ಬಹ್ರೇನ್ನ ವಿಮಾನಗಳು ರದ್ದುಗೊಂಡಿದೆ. ವಿಮಾನಗಳ ಹಾರಾಟ ರದ್ದು ಮಾಡಿರುವ ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ, ಖತಾರ್ ಸೇರಿದಂತೆ ಹಲವು ಏರ್ಲೈನ್ಸ್ಗಳು ವಿಮಾನ ಹಾರಾಟ ರದ್ದುಗೊಳಿಸಿದೆ.
ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಟಿಕೆಟ್ ರಿ ಸ್ಕೆಡ್ಯೂಲ್ ಅಥವಾ ಹಣ ವಾಪಸ್ಗೆ ವ್ಯವಸ್ಥೆ ಮಾಡಲಾಗಿದೆ. ಯುದ್ಧ ಆರಂಭದಿಂದಲೂ ಏರ್ಲೈನ್ಸ್ ಸಿಬ್ಬಂದಿ ಟಿಕೆಟ್ ಬುಕ್ ಮಾಡಿದವರಿಗೆ ಮಾಹಿತಿ ನೀಡುತ್ತಿದ್ದಾರೆ. ಫ್ಲೈಟ್ ಕನ್ಫರ್ಮ್ ಆಗದೇ ಏರ್ಪೋರ್ಟ್ಗೆ ಬಾರದಂತೆ ಏರ್ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣ ಹಾಗೂ ಏರ್ಪೋರ್ಟ್ನಲ್ಲಿ ಹೆಲ್ಪ್ ಡೆಸ್ಕ್ ಮೂಲಕ ಮನವಿ ಮಾಡಿದೆ.














