
ಪುಣಚ: ಪುಣಚ ಗ್ರಾಮದ ನೀರುಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿರುವ ವಾರ್ಷಿಕ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಫೆ.22ರಂದು ಬೆಳಿಗ್ಗೆ ಗರಡಿ ಪರಿಸರದಲ್ಲಿ ನೆರವೇರಿತು.
ಗರಡಿ ಆಡಳಿತ ಮೊಕ್ತೇಸರ ನಾರಾಯಣ ಪೂಜಾರಿ ನೀರುಮಜಲು ಮುಹೂರ್ತ ವಿಧಿವಿಧಾನಗಳನ್ನು ನಡೆಸಿದರು. ಸಂಕಪ್ಪ ಪೂಜಾರಿ, ಸೀತಾರಾಮ ಪೂಜಾರಿ ಹಾಗೂ ಶರತ್ ಕುಮಾರ್ ನೀರುಮಜಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೇಮೋತ್ಸವವು ಮಾ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.














