
ಬೆಂಗಳೂರು: ಕೇಂದ್ರದ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಮಾಡಿದ್ದೇವೆ. ನಮಗೆ ನಮ್ಮ ಪಾಲಿನ ಜಿಎಸ್ಟಿ (GST) ಹಣ ಕೊಡುವುದು ಮತ್ತು ನಮಗೆ ಕೇಂದ್ರದಿಂದ ವಿಶೇಷ ಅನುದಾನ ಭದ್ರ ಮೇಲ್ದಂಡೆಗೆ ಕೊಟ್ಟಿದ್ದರು ಅದು ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮಗೆ ಬರುವ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಹಣ ಬಿಡುಗಡೆ ಆಗಿಲ್ಲ. ಅವೆಲ್ಲಾ ನಮಗೆ ಬರಬಹುದು ಎಂಬ ನಿರೀಕ್ಷೆ ಇದೆ ಎಂದರು.
ಕೃಷಿ ಕ್ಷೇತ್ರ ಆಗಬಹುದು, ಕೈಗಾರಿಕಾ ಕ್ಷೇತ್ರಕ್ಕೆ ಆಗಬಹುದು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಡುಗೆ ಕೊಡಬೇಕಲ್ಲ. ಸರ್ಕಾರ ಇದೆ ಅನ್ನೋದು ಮುಖ್ಯ ಅಲ್ಲ. ಕೊಡುಗೆ ಕೊಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ರಾಜ್ಯದಿಂದ ದೇಶದ ಅಭಿವೃದ್ಧಿಗೆ ಹೆಚ್ಚು ಜಿಎಎಸ್ಟಿ ಕಟ್ಟುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡಬೇಕು. ಅದನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಅವರು ಏನು ಕೊಡ್ತಾರೆ ಗೊತ್ತಿಲ್ಲ ಎಂದರು














